Advertisement

ಕಲರ್‌ಫುಲ್‌ ರಂಗನಾಯಕ ಶೂಟಿಂಗ್‌ನಲ್ಲಿ ಬಿಝಿ

01:20 PM Aug 22, 2021 | Team Udayavani |

ಕನ್ನಡ ಚಿತ್ರರಂಗದಲ್ಲಿ “ಮಠ’, “ಎದ್ದೇಳು ಮಂಜುನಾಥ’ದಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ನವರಸ ನಾಯಕ ಜಗ್ಗೇಶ್‌ ಮತ್ತು ನಿರ್ದೇಶಕ ಗುರುಪ್ರಸಾದ್‌ ಜೋಡಿ ಈ ಬಾರಿ “ರಂಗನಾಯಕ’ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿರುವುದು ನಿಮಗೆ ಗೊತ್ತಿರಬಹುದು.

Advertisement

ಕಳೆದ ವರ್ಷವೇ ಸೆಟ್ಟೇರಿದ್ದ “ರಂಗನಾಯಕ’ ಚಿತ್ರದ ಚಿತ್ರೀಕರಣ ಕೋವಿಡ್‌ ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ನಿಗಧಿತ ಸಮಯಕ್ಕೆ ಆರಂಭವಾಗಿರಲಿಲ್ಲ. ಇದೀಗ ಮತ್ತೆ “ರಂಗನಾಯಕ’ ಸಿನಿಮಾದಕೆಲಸಗಳಿಗೆ ಚಾಲನೆ ಸಿಕ್ಕಿದೆ.

ಹೌದು, ಕೋವಿಡ್‌2ನೇ ಅಲೆಯ ಲಾಕ್‌ಡೌನ್‌ ಬಳಿಕ “ರಂಗನಾಯಕ’ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರಿನ ಹೊರವಲಯದಲ್ಲಿ “ರಂಗನಾಯಕ’ ಚಿತ್ರಕ್ಕಾಗಿ ಅದ್ಧೂರಿ ಸೆಟ್‌ ಹಾಕಿರುವ ಚಿತ್ರತಂಡ, ಕಳೆದಕೆಲ ದಿನಗಳಿಂದ ನಿರಂತರವಾಗಿ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದೆ. ಸದ್ಯ “ರಂಗನಾಯಕ’ನ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ನಟ ಜಗ್ಗೇಶ್‌ ಹಾಗೂ ಚಿತ್ರದಕಲಾವಿದರು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

“ವಿಖ್ಯಾತ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರಂಗ ನಾಯಕ’ ಚಿತ್ರಕ್ಕೆ ನಿರ್ದೇಶಕ ಗುರುಪ್ರಸಾದ್‌ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಹೊಣೆ ಹೊತ್ತುಕೊಂಡಿದ್ದಾರೆ. “ರಂಗ ನಾಯಕ’ನ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಒಟ್ಟಾರೆ ದೊಡ್ಡ ಗ್ಯಾಪ್‌ನ ಬಳಿಕ ಮತ್ತೆ ಒಂದಾಗುತ್ತಿರುವ ಜಗ್ಗೇಶ್‌ ಮತ್ತು ಗುರುಪ್ರಸಾದ್‌ ಜೋಡಿಯ “ರಂಗನಾಯಕ’ನ ಮೇಲೆ ಸಹಜವಾಗಿಯೇ ಒಂದಷ್ಟು ನಿರೀಕ್ಷೆ ಗರಿಗೆದರಿದ್ದು, ತೆರೆಮೇಲೆ “ರಂಗನಾಯಕ’ನ ಕಮಾಲ್‌ ಹೇಗಿದೆ ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next