Advertisement

ನನ್ನ ಪ್ರಾಮಾಣಿಕ ನುಡಿ ನಿಧಾನವಾಗಿ ಅರಿವಾಗುತ್ತೆ: ಜಗ್ಗೇಶ್ ಮಾತಿನ ಅರ್ಥವೇನು?

09:45 AM Jan 31, 2021 | Team Udayavani |

“ರಾಬರ್ಟ್‌’ ರಿಲೀಸ್‌ ಸಮಸ್ಯೆ ಕುರಿತು ಜಗ್ಗೇಶ್‌ ಪ್ರತಿಕ್ರಿಯೆ ರಾಬರ್ಟ್‌ ಸಿನಿಮಾಕ್ಕೆ ತೆಲುಗಿನಲ್ಲಿ ಬಿಡುಗಡೆ ಸಮಸ್ಯೆ ಎದುರಾಗಿರೋದು, ಇದರ ವಿರುದ್ಧ ಸಿಡಿದೆದ್ದ ದರ್ಶನ್‌ ವಾಣಿಜ್ಯ ಮಂಡಳಿಗೆ ದೂರು ನೀಡಿರೋದು ನಿಮಗೆ ಗೊತ್ತೇ ಇದೆ. ಈಗ ಈ ಬಗ್ಗೆ ನಟ ಜಗ್ಗೇಶ್‌ ಪ್ರತಿಕ್ರಿಯಿಸಿದ್ದಾರೆ.

Advertisement

“ಅಂದು ನಾನಾಡಿದ ಮಾತು ಕನ್ನಡಿಗರೆ ಸ್ವಾಭಿಮಾನಿಯಾ. ಕನ್ನಡಕ್ಕೆ ಮೊದಲು ಕೈಯತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತೆ ಎಂದು. ನನ್ನಭಾವನೆ ಅರ್ಥವಾಗದೆ ಸಮಯ ಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರ ರೂಪಿಸಿದರು. ಕೆಲವರು ನಂಬಿದರು. ನನ್ನಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತೆ ದೌರ್ಭಾಗ್ಯ’ಎಂದು ಟ್ವೀಟ್‌ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಜಗ್ಗೇಶ್‌, ಪ್ಯಾನ್‌ ಇಂಡಿಯಾ ಸಿನಿಮಾದಿಂದ ನಮ್ಮ ಕನ್ನಡಿಗರಿಗೆ ಯಾವುದೇ ಲಾಭವಿಲ್ಲ. ಇದರಿಂದ ಕನ್ನಡಿಗರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next