Advertisement

ಜಗ್ಗೇಶ್‌ ಹಾಡಿನೊಂದಿಗೆ ಜಂತರ್‌ ಮಂತರ್‌ ಮುಕ್ತಾಯ

10:43 AM Sep 05, 2017 | |

“ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗೋವಿಂದೇಗೌಡ (ಜೀಜಿ) ನಿರ್ದೇಶನದ “ಜಂತರ್‌ ಮಂತರ್‌’ ಚಿತ್ರ ಶುರುವಾಗಿದ್ದು ಗೊತ್ತೇ ಇದೆ. ಈಗ ಆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನಟ ಜಗ್ಗೇಶ್‌ ಅವರು ಹಾಡಿರುವ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರೀಕರಣ ಪೂರ್ಣಗೊಳಿಸಿದೆ ಚಿತ್ರತಂಡ. ಈ ಚಿತ್ರವನ್ನು ಹುಲಿಯಮ್ಮ ಮೂವಿ ಮೇಕರ್ ಬ್ಯಾನರ್‌ನಲ್ಲಿ ಶಿವಸುಂದರ್‌, ಬಿ.ನಾಗರಾಜ್‌, ಡಿ.ಸಾಲುಂಡಿ ನಿರ್ಮಿಸಿದ್ದಾರೆ.ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ.

Advertisement

ಗೋವಿಂದೇಗೌಡ ರಚಿಸಿದ “ಮದುವೆ ಮನವನ ಸೆಳೆದೆ, ಓ ರತಿಯೇ ರಮಣಗೆ ಒಲಿದೆ, ಚಂದ್ರಯಾನ ಕಾಂತಿಸೂದುವಳೆ, ಪ್ರಣಯಕೆ ಸ್ವಾಗತ ಕೋರುವಳೆ’ ಎಂಬ ಗೀತೆಗೆ ಜಗ್ಗೇಶ್‌ ಧ್ವನಿ ನೀಡಿದ್ದಾರೆ. ಈ ಹಾಡಲ್ಲಿ ಮಾಸ್ಟರ್‌ ಆನಂದ್‌ ಹಾಗೂ ನಯನ ಅಭಿನಯಿಸಿದ್ದಾರೆ. ಮುರುಳಿ ನೃತ್ಯ ನಿರ್ದೇಶನ  ಮಾಡಿದ್ದಾರೆ.

ನಿರ್ದೇಶಕ ಗೋವಿಂದೇಗೌಡ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಸುರೇಶ್‌ ಬಾಬು ಕ್ಯಾಮೆರಾ ಹಿಡಿದರೆ, ರಾಕಿಸೋನು ಸಂಗೀತವಿದೆ. ಚಿತ್ರದಲ್ಲಿ “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಶಿವರಾಜ್‌ ಕೆ.ಆರ್‌.ಪೇಟೆ, ನಯನ, ಸಂಭ್ರಮ, ಗೋವಿಂದೇಗೌಡ, ಹಿತೇಶ್‌, ಜೊತೆಗೆ ದಿವ್ಯಶ್ರೀ, ಸಂಜು ಬಸಯ್ಯ, ಶೋಭರಾಜ್‌, ಬಿರಾದರ್‌, ವಿ.ಮನೋಹರ್‌ ಮುಂತಾದವರಿ¨ªಾರೆ. 

Advertisement

Udayavani is now on Telegram. Click here to join our channel and stay updated with the latest news.

Next