Advertisement

ನಿಲ್ತಿಲ್ಲ ನೀಲಿ ಬಾಯಿ ರೋಗ

12:34 PM Nov 25, 2019 | Naveen |

ಜಗಳೂರು: ತಾಲೂಕಿನಾದ್ಯಂತ ನೀಲಿ ನಾಲಿಗೆ ರೋಗ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ರೋಗಬಾಧೆಯಿಂದ ಪ್ರತಿನಿತ್ಯ ಕುರಿಗಳು ಸಾಯುತ್ತಿವೆ ಎಂದು ಕುರಿಗಾಹಿಗಳು ದೂರಿದ್ದಾರೆ.

Advertisement

ಜಿಲ್ಲೆಯ ಜಗಳೂರು ತಾಲೂಕಿನಲ್ಲಿಯೇ ಅತಿ ಹೆಚ್ಚು ಕುರಿ ಸಾಕಾಣಿಕೆ ಇದ್ದು, ತಾಲೂಕಿನಲ್ಲಿ ಒಟ್ಟು 91,392 ಕುರಿ-ಮೇಕೆಗಳಿವೆ. ಗುಡ್ಡದ ಲಿಂಗಣ್ಣ ಹಳ್ಳಿ, ಮಲ್ಲಾಪುರ, ಚಿಕ್ಕ ಮಲ್ಲನಹೊಳೆ, ಭçರನಾಯಕನ ಹಳ್ಳಿ, ಪಲ್ಲಾಗಟ್ಟೆ, ಗಿಡ್ಡನಕಟ್ಟೆ, ತೋರಣಗಟ್ಟೆ, ಬಿಳಿಚೊಡು, ಹಿರೇ ಮಲ್ಲನಹೊಳೆ, ಹಾಲೆಕಲ್ಲು, ಬಸವನಕೊಪ್ಪ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಪ್ರತಿ ನಿತ್ಯ ಕುರಿಗಳು ಸಾವಿಗೀಡಾಗುತ್ತಿವೆ. ಇಲ್ಲಿಯವರೆಗೆ ಸುಮಾರು 200ಕ್ಕೂ ಅ ಧಿಕ ಕುರಿಗಳು ನೀಲಿ ನಾಲಿಗೆ ರೋಗದಿಂದ ಸತ್ತಿವೆ.

ಕುರಿಗಳಿಗೆ ವಿಪರೀತ ಜ್ವರ, ಸುಸ್ತು, ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ನೀಲಿ ನಾಲಿಗೆ ರೋಗದ ಲಕ್ಷಣವಾಗಿದೆ . ಈ ರೋಗಕ್ಕೆ ತುತ್ತಾದ ಕುರಿಗಳನ್ನು ಬೇರೆಡೆ ಕಟ್ಟಬೇಕು, ಸೊಳ್ಳೆ ಪರದೆ ಹಾಕಿ ಇತರ ಕುರಿಗಳಿಂದ ಪ್ರತ್ಯೇಕಿಸಬೇಕು ಮತ್ತು ಎತ್ತರದ ಪ್ರದೇಶಗಳಲ್ಲಿ ಕೆಲವು ದಿನಗಳ ಕಾಲ ಇವುಗಳನ್ನು ಇರಿಸುವುದರಿಂದ ಈ ರೋಗ ಹರಡದಂತೆ ತಡೆಯಬಹುದಾಗಿದೆ. ರೋಗದಿಂದ ಸತ್ತ ಕುರಿಗಳನ್ನು ಹೂಳಬೇಕು. ಆದರೆ ಕೆಲವರು ಅರಣ್ಯ ಪ್ರದೇಶ ಮತ್ತು ರಸ್ತೆಯ ಪಕ್ಕದಲ್ಲಿ ಹಾಕುವುದು, ಬೇವಿನ ಮರಕ್ಕೆ ಕಟ್ಟುವುದು ಮಾಡುತ್ತಿರುವುದರಿಂದ ಈ ರೋಗ ವೇಗವಾಗಿ ಹರಡುತ್ತಿದೆ. ಈ ಕುರಿತು ಪಶು ವೈದ್ಯಕೀಯ ಮತ್ತು ಪಶು ಸಂಗೋಪನಾ ಇಲಾಖೇ ಜಾಗೃತಿ ಮೂಡಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next