Advertisement

ಆರೋಗ್ಯ ಕೇಂದ್ರಕ್ಕೇ ಅನಾರೋಗ್ಯ!

12:49 PM May 12, 2019 | Team Udayavani |

ಜಗಳೂರು: ಮುಸ್ಟೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಧ್ಯಾಹ್ನದ ವೇಳೆಗೇ ಗ ಮುಚ್ಚಲಾಗುತ್ತಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Advertisement

ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಸರಿಗೆ ಮಾತ್ರ ಇದೆ. ಇಲ್ಲಿಗೆ ವೈದ್ಯರು ಬರುವುದೇ ವಿರಳ. ನರ್ಸ್‌ಗಳು ಬಂದು ಕೆಲವು ಗಂಟೆ ಕಾಲ ಕಳೆದು ನಂತರ ಕೇಂದ್ರಕ್ಕೆ ಬೀಗ ಜಡಿದುಕೊಂಡು ತೆರಳುತ್ತಾರೆ ಎಂದು ಗ್ರಾಮಸ್ಥರು ದೂರುತ್ತಾರೆ.

ಮುಸ್ಟೂರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಚಿಕಿತ್ಸೆಗೆಂದು ಬಂದು ಹಿಂದಿರುಗಿ ತೆ‌ರಳುವುದು ಸಾಮಾನ್ಯವಾಗಿದೆ. ಹೀಗಾಗಿ ಗ್ರಾಮಸ್ಥರು ಚಿಕಿತ್ಸೆಗಾಗಿ ತಾಲೂಕು ಕೇಂದ್ರ ಜಗಳೂರು ಮತ್ತು ಪಕ್ಕದ ನಾಯಕನ ಹಟ್ಟಿಗೆ ತೆರಳುವಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರಾದ ಜಯ್ಯಣ್ಣ, ಮಂಜಣ್ಣ.

Advertisement

Udayavani is now on Telegram. Click here to join our channel and stay updated with the latest news.

Next