Advertisement

ಸೀಲ್‌ಡೌನ್‌ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ

11:58 AM Jul 03, 2020 | Naveen |

ಜಗಳೂರು: ತಾಲೂಕಿನಲ್ಲಿ ಮೂವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್‌ ಡೌನ್‌ ಮಾಡಲಾದ ಬಡಾವಣೆಗಳಲ್ಲಿ ಪಪಂ ಸಹಯೋಗದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ರಾಸಾಯನಿಕ ದ್ರಾವಣವನ್ನು ಸಿಂಪಡಣೆ ಮಾಡಿದರು.

Advertisement

ಪಟ್ಟಣದ ಜೆಸಿಆರ್‌ ಬಡಾವಣೆ ಹಾಗೂ ಬೈಪಾಸ್‌ ರಸ್ತೆ ಸಮೀಪದ ಇಬ್ಬರಿಗೆ ಕೋವಿಡ್ ಸೋಂಕು ಧೃಢ ಪಟ್ಟಿದೆ. ಆರೋಗ್ಯ ಇಲಾಖೆಯವರು ಅಲ್ಲಿನ ನಿವಾಸಿಗಳ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮತ್ತೊಂದೆಡೆ ಕೋವಿಡ್ ವೈರಸ್‌ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಪಪಂ ಸಹಯೋಗದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಆರ್‌ ಬಡಾವಣೆ ಹಾಗೂ ಬೈಪಾಸ್‌ ರಸ್ತೆಯಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಿದರು.

ಈ ವೇಳೆ ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್‌, ತಾಲೂಕು ವೈದ್ಯಾಧಿಕಾರಿ ಡಾ| ನಾಗರಾಜ್‌, ಅಗ್ನಿಶಾವåಕ ಠಾಣಾಧಿಕಾರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next