Advertisement

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

08:56 PM Jun 15, 2024 | Team Udayavani |

ದಾವಣಗೆರೆ: ಏಕಾಏಕಿ ಮೂರು ಕರಡಿಗಳು ರೈತರೊಬ್ಬರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ಜಗಳೂರು ತಾಲೂಕು ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

Advertisement

ಹನುಮಂತಪ್ಪ (48 ವರ್ಷ) ಗಾಯಗೊಂಡ ವ್ಯಕ್ತಿ. ಇವರು ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಮೂರು ಕರಡಿಗಳು ಮೇಲೆ ದಾಳಿ ಮಾಡಿ ಎರಡು ಕೈಗಳಿಗೆ, ತಲೆಗೆ ಹಾಗೂ ಕಾಲು ಹಾಗೂ ಬೆನ್ನಿಗೆ ಬೆನ್ನಿಗೆ ಗಾಯಗೊಳಿಸಿದವು. ಹನುಮಂತಪ್ಪ ಕಿರುಚಿದಾಗ ಅಕ್ಕ ಪಕ್ಕದ ಜಮೀನಿನಲ್ಲಿದ್ದ ತಮ್ಮ ಗ್ರಾಮದವರು ಬಂದು ಕರಡಿಗಳನ್ನು ಓಡಿಸಿದ್ದಾರೆ.

ಗಾಯಗೊಂಡ ಹನುಮಂತಪ್ಪ ಅವರನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next