Advertisement

Suraj Revanna ಆರೋಪ ರಾಜಕೀಯ ಷಡ್ಯಂತ್ರ

12:02 AM Jun 23, 2024 | Team Udayavani |

ಹಾಸನ: ನನ್ನ ಮೇಲಿನ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ಆರೋಪ ರಾಜಕೀಯ ಷಡ್ಯಂತ್ರ ಎಂದು ವಿಧಾನ ಪರಿಷತ್‌ ಸದಸ್ಯ ಡಾ| ಸೂರಜ್‌ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

Advertisement

ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್ಐಆರ್‌ ದಾಖಲಾದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪವನ್ನು ಖಡಾಖಂಡಿತ ನಿರಾಕರಿಸುತ್ತೇನೆ. ಎಫ್ಐಆರ್‌ ದಾಖಲಾಗಿರುವುದರಿಂದ ನಾನು ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದರು.

ಈ ನೆಲದ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ತನಿಖೆ ನಡೆಯಲಿ. ನನ್ನ ಮೇಲಿನ ರಾಜಕೀಯ ಷಡ್ಯಂತ್ರಕ್ಕೆ ಕಾಲವೇ ಉತ್ತರ ನೀಡಲಿದೆ. ಈ ಎಲ್ಲ ಕುತಂತ್ರಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದರು.

ನನ್ನ ಬಳಿ ಚರ್ಚಿಸಬೇಡಿ: ಎಚ್‌ಡಿಕೆ
ಬೆಂಗಳೂರಿನಲ್ಲಿ ಸೂರಜ್‌ ಕುರಿತ ಸುದ್ದಿಗಾರರ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಅದೆಲ್ಲ ಬೇಡ ಎನ್ನುತ್ತಾ ಪ್ರತಿಕ್ರಿಯಿಸಲು ನಿರಾಕರಿಸಿದರು. ಇಂತಹ ವಿಷಯಗಳನ್ನು ನನ್ನ ಹತ್ತಿರ ಚರ್ಚೆ ಮಾಡಬಾರದು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿದ್ದರೆ ಚರ್ಚೆ ಮಾಡಿ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next