Advertisement

ಜಗಜೀವನರಾಂ ದಕ್ಷ ಆಡಳಿತಗಾರ: ಲೋಕೇಶ್‌

05:53 AM Jul 08, 2020 | Lakshmi GovindaRaj |

ಕೆ.ಆರ್‌.ನಗರ: ಡಾ.ಬಾಬು ಜಗಜೀವನರಾಂ ಸ್ವಾತಂತ್ಯ ಸೇನಾನಿ, ದಕ್ಷ ಆಡಳಿತಗಾರ ಹಾಗೂ ದಣಿವರಿಯದ ನಾಯಕ ಎಂದು ತಾಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್‌ ಹೇಳಿದರು. ಪುರಸಭೆ ಕಚೇರಿಯಲ್ಲಿ ತಾಲೂಕು  ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಬಾಬು ಜಗಜೀವನರಾಂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

Advertisement

ಹುಟ್ಟಿನಿಂದಲೇ ಹೋರಾಟದ ಮನೋಭಾವನೆ ಬೆಳೆಸಿಕೊಂಡಿದ್ದ ಬಾಬು  ಜನಜೀವನರಾಂ ಸತತ ಸಂಸದರಾಗಿ ಸೋಲಿಲ್ಲದ ಸರದಾರರಾಗಿದ್ದರು ಎಂದರು. ಅಂಬೇಡ್ಕರ್‌ ಹಾಗೂ ಬಾಬು ಜಗಜೀವ ನರಾಂ ಶೋಷಿತ ಸಮಾಜಗಳ ಎರಡು ಕಣ್ಣುಗಳಿದ್ದಂತೆ. ಅವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಯುವಜನತೆ  ನಡೆಯಬೇಕು. ಆಗ ಮಾತ್ರ ಮಹನೀಯರ ಪುಣ್ಯಸ್ಮರಣೆಗಳಿಗೆ ನಿಜ ಅರ್ಥ ಬರಲಿದೆ ಎಂದರು.

ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ರವಿಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹದೇವ್‌, ಮುಖಂಡರಾದ ಈರಯ್ಯ, ಸ್ವಾಮಿ,  ಮಹದೇವ್‌, ಶ್ರೀನಿವಾಸ್‌, ಚಲುವರಾಜು, ರಮೇಶ್‌, ಕೃಷ್ಣ, ವಜ್ರೆಶ್‌, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ವಿಲ್ಸನ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್‌, ಸಿಬ್ಬಂದಿಗಳಾದ ಸಿದ್ದರಾಜು, ಕೃಷ್ಣ, ಪುರಂದರ,  ಭಾರತಿ, ಮಾದೇಶ್‌, ರಾಜು, ಕಚೇರಿ ವ್ಯವಸ್ಥಾಪಕ ಕೃಷ್ಣಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next