Advertisement

ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವರಾದ ನಾವು ‘ತಾಂಟಲು’ಸಿದ್ದ: ಪ್ರತಿಭಾ ಕುಳಾಯಿ

02:55 PM Feb 06, 2021 | Team Udayavani |

ಸುರತ್ಕಲ್: “ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಬಗ್ಗೆ ಮತ್ತು ಸಮಸ್ತ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಮ್ಮ ಗರಡಿಗೆ ಬಂದು ತಪ್ಪು ಕಾಣಿಕೆ ಹಾಕಿ ಸಮಾಜದ ಮುಂದೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅಧಿಕಾರಿಯವರೇ ಹೇಳುವಂತೆ ಅವರು ಸಿಕ್ಕಲ್ಲೆಲ್ಲ ನಾವು ತಾಂಟಲು ಸಿದ್ದರಿದ್ದೇವೆ” ಎಂದು ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

Advertisement

ಕೋಟಿ ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ. ಅನೇಕ ಪವಾಡಗಳು ಕಾರಣಿಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ. ಹೀಗಿರುವಾಗ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಎಂಬ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತಾಡಿರುವುದು ಖಂಡನೀಯ ಮಾತ್ರವಲ್ಲ ಆಶ್ಚರ್ಯ ಹುಟ್ಟಿಸುತ್ತದೆ. ಮಾತೆತ್ತಿದರೆ ಹಿಂದೂ ಧರ್ಮ, ಹಿಂದೂ ದೈವ ದೇವರನ್ನು ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಬಿಜೆಪಿ ನಾಯಕರ ನಾಲಗೆಯಲ್ಲಿ ಇಂತಹ ಮಾತು ಬರುತ್ತಿರುವುದು ಖೇದಕರ ಅಲ್ಲದೆ ಇನ್ನೇನು? ಎಂದು ಪ್ರತಿಭಾ ಪ್ರಶ್ನಿಸಿದರು.

ಇದನ್ನೂ ಓದಿ:ಟಿಇಎಸ್ 45 2021 ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಭಾರತೀಯ ಸೇನೆ

ಜಗದೀಶ್ ಅಧಿಕಾರಿ ಎನ್ನುವ ತುಳುನಾಡಿನ ಗಂಧ ಗಾಳಿ ಅರಿಯದ ಮೂರ್ಖ ರಾಜಕಾರಣಿ ಬಿಲ್ಲವ ಸಮುದಾಯದ ತಾಳ್ಮೆ ಪರೀಕ್ಷಿಸುವುದು ಬೇಡ. ಕೋಟಿ ಚೆನ್ನಯರ ಜೀವನ ಮತ್ತು ಹೋರಾಟವನ್ನು ಲೇವಡಿ ಮಾಡಲು ಇವರಿಗೆ ಅವಕಾಶ ಕೊಟ್ಟವರಾರು ಎಂದರು.

ಜನಾರ್ದನ ಪೂಜಾರಿ ನಮ್ಮ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಕಂಡ ನಿಷ್ಕಲಂಕ ರಾಜಕಾರಣಿ. ಇವರ ಕಾಲು ಹಿಡಿಯುವುದಲ್ಲ, ಜಗದೀಶ್ ಅಧಿಕಾರಿಯಂತವರು ಪಾದ ತೊಳೆದರೂ ಪಾಪ ತಟ್ಟುವುದಿಲ್ಲ. ಅವರಿಗೆ ಇನ್ನೊಮ್ಮೆ ಬೈಯುತ್ತೇನೆ, ಪ್ರಚಾರ ಸಿಗುತ್ತದೆ ಎನ್ನುವ ಅಧಿಕಾರಿಗೆ ತಲೆ ಸರಿಯಿಲ್ಲ ಎನ್ನುವುದು ಸತ್ಯ. ಕೋಟಿ ಚೆನ್ನಯರನ್ನು ಮತ್ತು ಬಿಲ್ಲವ ಸಮುದಾಯವನ್ನು ಅವಹೇಳನ ಮಾಡಿರುವ ಜಗದೀಶ್ ಅಧಿಕಾರಿ ಕೂಡಲೇ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಅಣ್ಣಯ್ಯ ಅಂಚನ್ ಮುಕ್ಕ, ಬಿಕೆ ತಾರಾನಾಥ್, ಸೂರ್ಯನಾರಾಯಣ ಹೊಸಬೆಟ್ಟು, ರಾಜೇಶ್ ಕುಳಾಯಿ, ಚರಣ್ ಸನಿಲ್, ಜಗದೀಶ್ ಅಮೀನ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next