Advertisement

ಧರಣಿ ನಿರತ ರೈತರಿಗೆ ಫೋನ್ ಮಾಡಿ ಮಾತಾಡಿದ ಜಗದೀಶ ಶೆಟ್ಟರ್

10:02 AM Sep 18, 2019 | Team Udayavani |

ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿದ್ದು, ಸಚಿವ ಜಗದೀಶ ಶೆಟ್ಟರ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಬೆನ್ನಲ್ಲೇ ರೈತ ಮುಖಂಡರೊಂದಿಗೆ ಪೋನ್ ಮಾಡಿ ವಿಚಾರಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತ ರೈತರ ಸಮಸ್ಯೆ ಆಲಿಸಿದ ಜಿಲ್ಲಾ ಉಸ್ತುವಾರಿ ಜಗದೀಶ್ ಶೆಟ್ಟರ್ ಅವರು, ನೆರೆ ಸಂತ್ರಸ್ತರ ಬೇಡಿಕೆ ಕುರಿತು ರೈತ ಮುಖಂಡರಿಗೆ ಕರೆ ಮಾಡಿ ಮಾತನಾಡಿದರು.‌

ತಕ್ಷಣ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ಸಮಸ್ಯೆ ಸ್ಪಂದಿಸುವುದಾಗಿ ಹೇಳುತ್ತೇನೆ. ಎರಡು ದಿನಗಳಲ್ಲಿ ಖುದ್ದು ನಾನೇ ಬಂದು ನಿಮ್ಮ ಬೇಡಿಕೆ ಕೇಳುತ್ತೇನೆ.
ನಿನ್ನೆಯಷ್ಟೇ ನಾನು ಉಸ್ತುವಾರಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಎರಡ್ಮೂರು ದಿನಗಳಲ್ಲಿ ಎಲ್ಲ ಸರಿ ಪಡಿಸುವುದಾಗಿ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next