Advertisement

Jackfruit ವಿಚಾರ: ಕತ್ತಿ ತೋರಿಸಿ ಬೆದರಿಕೆ ಆರೋಪ; ಪ್ರಕರಣ ದಾಖಲು

12:38 PM Jul 26, 2024 | Team Udayavani |

ಪುತ್ತೂರು: ಅರಿಯಡ್ಕ ಗ್ರಾಮದಲ್ಲಿ ಹಲಸಿನ ಹಣ್ಣಿನ ವಿಚಾರದಲ್ಲಿ ಜಗಳ ಉಂಟಾಗಿ, ವ್ಯಕ್ತಿಯೊಬ್ಬರಿಗೆ ಕತ್ತಿ ತೋರಿಸಿ ಹÇÉೆ ನಡೆಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.

Advertisement

ಅರಿಯಡ್ಕ ಗ್ರಾಮದ ಅರುಣ್‌ ಕುಮಾರ್‌ (37) ಅವರು ಹಲ್ಲೆಗೊಳಗಾದವರು. ಅವರು ಕೃಷಿ ಕೆಲಸ ಮಾಡುತ್ತಿದ್ದು, ಅವರಿಗೆ ಹಾಗೂ ಮನೆಯ ನೆರೆಯ ಸಂಬಂಧಿಕರಾದ ನಾಗೇಶ್‌ ಮಣಿಯಾಣಿ ಅವರ ಮಧ್ಯೆ ಜಾಗದ ವಿಚಾರದಲ್ಲಿ ಮನಸ್ತಾಪವಿದ್ದು, ಜು. 24ರಂದು ಅರುಣ್‌ ಅವರು ತಮಗೆ ಸೇರಿದ ಜಾಗದಲ್ಲಿ ಹಲಸಿನ ಹಣ್ಣನ್ನು ತೆಗೆಯುತ್ತಿರುವಾಗ ಆರೋಪಿಗಳಾದ ನಾಗೇಶ್‌ ಮತ್ತು ಆತನ ಹೆಂಡತಿ ಯಶೋಧರಾ ಬಂದು ಅರುಣ್‌ ಹಾಗೂ ಅವರ ತಾಯಿ ಜಯಲಕ್ಷ್ಮೀ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ ಅರುಣ್‌ ಅವರಿಗೆ ಆರೋಪಿಗಳು ಹಲ್ಲೆ ನಡೆಸಿದ್ದು, ಆ ವೇಳೆ ಅರುಣ್‌ ತಾಯಿ ಗಲಾಟೆಯನ್ನು ಬಿಡಿಸಿದ್ದು, ಆರೋಪಿ ನಾಗೇಶ್‌ ಮಣಿಯಾಣಿ, ಅರುಣ್‌ ಅವರನ್ನು ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಒಡ್ಡಿರುತ್ತಾನೆ ಎಂದು ದೂರಲಾಗಿದೆ.

ಹಲ್ಲೆಯಿಂದ ಉಂಟಾದ ಗಾಯದ ಚಿಕಿತ್ಸೆಗಾಗಿ ಅರುಣ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next