Advertisement

ಉಗ್ರರಿಗೆ ಸ್ಥಳೀಯರ ನೆರವು;ಬುದ್ಗಾಮ್‌ನಲ್ಲಿ ಹಿಂಸೆ, ಗುಂಡಿಗೆ 2 ಬಲಿ

03:57 PM Mar 28, 2017 | Team Udayavani |

 ಶ್ರೀನಗರ: ಕಾಶ್ಮೀರದ ಬುದ್ಗಾಮ್‌ನಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕೆಲ ಸ್ಥಳೀಯರು ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದ ಘಟನೆ ಸೋಮವಾರ ನಡೆದಿದೆ. 

Advertisement

ಅಡಗಿದ್ದ ಉಗ್ರರ ವಿರುದ್ಧ ಸೇನಾ ಪಡೆಗಳು ಕಾರ್ಯಾಚರಣೆಗಿಳಿದಾಗ ನೂರಾರು ಯುವಕರು ಕಲ್ಲು ತೂರಾಟ ನಡೆಸಿ ಉಗ್ರರ ಪರ ನಿಂತಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಇಬ್ಬರು  ಬಲಿಯಾಗಿದ್ದು, 7 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಇಬ್ಬರ ಹತ್ಯೆ ಬಳಿಕ ಹಿಂಸಾಚಾರ ಇನ್ನಷ್ಟು ವ್ಯಾಪಿಸಿದ್ದು ಸ್ಥಳದಲ್ಲಿ ಕರ್ಫ್ಯೂ ಹೇರಿ ಉಗ್ರರ ವಿರುದ್ಧ  ಗುಂಡಿನ ಕಾಳಗ ನಡೆಸಲಾಗುತ್ತಿದೆ. 

ಅನಂತ್‌ನಾಗ್‌ನ ಬಿಜ್‌ಬೆಹಾರ ಬಳಿ ಸಚಿವ ಅಬ್ದುಲ್‌ ರೆಹಮಾನ್‌ ವೀರಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next