Advertisement

ಊಹಾಪೋಹಗಳಿಗೆ ಉತ್ತರಿಸೋ ಸಮಯ ಇದಲ್ಲ ಶರ್ಮಿಳಾ ಮಾಂಡ್ರೆ

04:05 AM May 23, 2020 | Lakshmi GovindaRaj |

ಲಾಕ್‌ ಡೌನ್‌ ಸಮಯದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಸುದ್ದಿಯಾಗಿದ್ದು ನಿಮಗೆ ನೆನಪಿರಬಹುದು. ಅದು ಅವರಿದ್ದ ಕಾರು ಅಪಘಾತವಾಗಿ ಅದರಿಂದ ಶರ್ಮಿಳಾ ಮಾಂಡ್ರೆಗೆ ಗಾಯಗಳಾಗಿತ್ತು. ಇದರ ಬೆನ್ನಲ್ಲೇ ಶರ್ಮಿಳಾ ಹಾಗೂ ಫ್ರೆಂಡ್ಸ್‌  ಪಾರ್ಟಿ ಮಾಡಿಕೊಂಡು ಮನೆಗೆ ತೆರಳುವ ವೇಳೆ ಈ ಸಂಭವಿಸಿತು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ, ಶರ್ಮಿಳಾ ಮಾತ್ರ ಹೊಟ್ಟೆಹೆಚ್ಚಾಗಿ ಆಸ್ಪತ್ರೆಗೆ ಹೋಗುವಾಗ ಅಪಘಾತ ನಡೆಯಿತು ಎಂದು ಟ್ವೀಟ್‌ ಆ ನಂತರ ಶರ್ಮಿಳಾ ಏನೂ  ಮಾತನಾಡಿರಲಿಲ್ಲ.

Advertisement

ಈಗ ಶರ್ಮಿಳಾ ಮಾಂಡ್ರೆ ಮಾಡಿ ಅಪಘಾತ ಸಮಯದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಜೊತೆಗೆ ತಮ್ಮ ಕಷ್ಟದ ಸಮಯದಲ್ಲಿ ನೆರವಿಗೆ ಬಂದ ವೈದ್ಯರಿಗೂ ಥ್ಯಾಂಕ್‌ಶರ್ಮಿಳಾ, ತಾನೀಗ ಹುಷಾರಾಗುತ್ತಿದ್ದೇನೆ  ಎಂದಿದ್ದಾರೆ. ಜೊತೆಗೆ ಅಪಘಸಮಯದಲ್ಲಿ ಎದ್ದಿದ್ದ ಊಹಾಪೋಹಗಳ ಬಗ್ಗೆಯೂ ಟ್ವೀಟ್‌ ಮಾಡಿರುವ ಅಪಘಾತ ಸಮಯದಲ್ಲಿ ನನ್ನ ಸುತ್ತ ಸಾಕಷ್ಟು ಊಹಾಪೋಹಗಳು ಎದಿಅವೆಲ್ಲಕ್ಕೆ ಉತ್ತರ ಕೊಡುತ್ತಾ ಕೂರುವುದಕ್ಕಿಂತ ನಾನು  ಹುಷಾರಾಗೋದು ಮುಖ್ಯವಾಗಿತ್ತು. ನನಗೆ ಹಲವು ಫ್ರಾಕ್ಚರ್‌ಗಳಾಗಿದ್ದವು. ಹಾಗಾಗಿ ನಾನು ಪ್ರತಿಕ್ರಿಯಿಸಲಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಇದರ ಹೊರತಾಗಿ ಶರ್ಮಿಳಾ ಬೇರೆ ಯಾವ ವಿಷಯಗಳ ಬಗ್ಗೆಯೂ ಪ್ರತಿಕ್ರಿಯಿಸಿಲ್ಲ. ಸಜನಿ ಚಿತ್ರದ  ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶರ್ಮಿಳಾ, ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಯೋಗರಾಜ್‌ ಭಟ್‌ ಅವರ ಗಾಳಿಪಟ 2 ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ  ಶರ್ಮಿಳಾ ಸಿನಿಮಾ ನಿರ್ಮಾಣಕ್ಕೂ  ಇಳಿದಿದ್ದು, ವೈತರುಣಿ ಎಂಬ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸತೀಶ್‌ ನೀನಾಸಂ ನಾಯಕರಾಗಿದ್ದು, ಶರ್ಮಿಳಾ ಕೂಡಾ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next