Advertisement
ಚೀನ ಗಡಿ ಶಾಂತವಾಗಿದ್ದಾಗ ಕಾಯಲೆಂದೇ ಐಟಿಬಿಪಿಯನ್ನು ರಚಿಸಲಾಗಿದ್ದು, ಈ ಪಡೆ 3,488 ಕಿ.ಮೀ ಗಡಿಯಲ್ಲಿದೆ. ಆದರೆ ಲೇಹ್ನಲ್ಲಿ ಸೇನೆಯೇ ಈ ಕೆಲಸ ಮಾಡುತ್ತಿದೆ. ಇದೀಗ ಲೇಹ್ನಲ್ಲಿ ಸೇನೆಯ ಜೊತೆಗೆ ಐಟಿಬಿಪಿ ಕೂಡ ಗಡಿ ಪಹರೆ ನಡೆಸಲಿದೆ. ಕಳೆದ ಕೆಲವೇ ದಿನಗಳ ಹಿಂದೆ ಸರಕಾರ ಈ ಆದೇಶ ಹೊರಡಿಸಿದ್ದು, ಮಾರ್ಚ್ ಒಳಗೆ ಇಡೀ ಚಂಡೀಗಢ ನೆಲೆಯನ್ನು ಲೇಹ್ಗೆ ಸ್ಥಳಾಂತರಿಸಿ, ಎಪ್ರಿಲ್ 1ರಿಂದ ಕಾರ್ಯನಿರ್ವಹಿಸಲು ಸಿದ್ಧರಾಗಿ ಎಂದು ಸೂಚನೆ ನೀಡಿದೆ.
Related Articles
ಶ್ರೀನಗರದಲ್ಲಿ ಗುರುವಾರ ಭದ್ರತಾ ಪಡೆಯ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಮೂವರು ಟ್ರಾಫಿಕ್ ಪೊಲೀಸರು ಗಾಯಗೊಂಡಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಪ್ರಧಾನ ಕಚೇರಿ ಹಾಗೂ ಆಲ್ ಇಂಡಿಯಾ ರೇಡಿಯೋದ ಸ್ಥಳೀಯ ಕಚೇರಿಯಿಂದ 100 ಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. ಕೂಡಲೇ ಎಚ್ಚೆತ್ತ ಭದ್ರತಾ ಪಡೆ, ಶೋಧ ಕಾರ್ಯ ಆರಂಭಿಸಿದ್ದು, ಉಗ್ರರ ಪತ್ತೆಗೆ ಬಲೆ ಬೀಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಪಾಕ್ನಿಂದ ಗುಂಡಿನ ದಾಳಿಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಮುಂದುವರಿದಿದೆ. ಗುರುವಾರವೂ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆ ಶೆಲ್ ದಾಳಿ ನಡೆಸಿದೆ. ಪರಿಣಾಮ ಓರ್ವ ನಾಗರಿಕ ಗಾಯಗೊಂಡಿದ್ದಾರೆ. ಭಾರತ-ಪಾಕ್ ಗಡಿಯಲ್ಲಿ 2018ರಲ್ಲಿ ಬರೋಬ್ಬರಿ 2,936 ಬಾರಿ ಪಾಕಿಸ್ಥಾನವು ಕದನ ವಿರಾಮ ಉಲ್ಲಂ ಸಿದೆ. ಇದು ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚು ಎಂದು ಸೇನಾ ಮೂಲಗಳು ತಿಳಿಸಿವೆ. ಉಮರ್ ಅಬ್ದುಲ್ಲಾ ವಿವಾದ
ಕಳೆದ ವರ್ಷ ಕಣಿವೆ ರಾಜ್ಯದಲ್ಲಿ ಅತ್ಯಧಿಕ ಉಗ್ರರನ್ನು ಸದೆಬಡಿಯಲಾಗಿದೆ ಎಂಬ ಸೇನೆಯ ಮಾಹಿತಿಯನ್ನು ಉಲ್ಲೇಖೀಸಿ ವ್ಯಂಗ್ಯ ಮಾಡುವ ಮೂಲಕ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ವಿವಾದ ಸೃಷ್ಟಿಸಿದ್ದಾರೆ. ನನ್ನ ಪ್ರಕಾರ, “ಒಬ್ಬನೇ ಒಬ್ಬ ಯುವಕನೂ ಉಗ್ರ ಸಂಘಟನೆಗೆ ಸೇರ್ಪಡೆಯಾಗದೇ ಇರುತ್ತಿದ್ದರೆ, ಎನ್ಕೌಂಟರ್ನಲ್ಲಿ ಯಾವ ಭಯೋತ್ಪಾದಕನೂ ಸಾಯದೇ ಇರುತ್ತಿದ್ದರೆ, ಯಾವ ಯೋಧನೂ ಹುತಾತ್ಮನಾಗದೇ ಇರುತ್ತಿದ್ದರೆ ಅಂಥ ವರ್ಷವನ್ನು ಶ್ರೇಷ್ಠ ವರ್ಷ ಎಂದು ಹೇಳಬಹುದು’ ಎಂದು ಉಮರ್ ಟ್ವೀಟ್ ಮಾಡಿದ್ದಾರೆ. ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.