Advertisement

ಛತ್ತೀಸ್‌ಗಢ: ಪ್ರಶರ್‌ ಬಾಂಬ್‌ ಸಿಡಿದು ಐಟಿಬಿಪಿ ಜವಾನನಿಗೆ ಗಾಯ

05:06 PM Feb 07, 2018 | Team Udayavani |

ರಾಯಪುರ : ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ಹುಗಿದಿಟ್ಟಿದ್ದ  pressure bomb ಸಿಡಿದ ಪರಿಣಾಮವಾಗಿ ಇಂಡೋ ಟಿಬೆಟಾನ್‌ ಬಾರ್ಡರ್‌ ಪೊಲೀಸ್‌ ಸಿಬಂದಿಯೋರ್ವ ಗಾಯಗೊಂಡನೆಂದು ಪೊಲೀಸರು ತಿಳಿಸಿದ್ದಾರೆ. 

Advertisement

ಇಲ್ಲಿಂದ ಸುಮಾರು 300 ಕಿ.ಮೀ.ದ ಧನೋರಾ – ಓರ್ಛಾ ರಸ್ತೆಯಲ್ಲಿ ಗಸ್ತು ನಿರತ ಭದ್ರತಾ ಪಡೆಗಳು ಇಂದು ಬೆಳಗ್ಗೆ ತಮ್ಮ ಎಂದಿನ ಕರ್ತವ್ಯದಲ್ಲಿ ತೊಡಗಿದಾಗ ನಕ್ಸಲರು ಹುಗಿದಿಟ್ಟಿದ್ದ ಪ್ರಶರ್‌ ಬಾಂಬ್‌ ಸಿಡಿದು ಐಟಿಬಿಪಿ ಪೊಲೀಸ್‌ ಸಿಬಂದಿ ಗಾಯಗೊಂಡ ಘಟನೆ ನಡೆಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಭದ್ರತಾ ಸಿಬಂದಿಗಳು ಧನೋರಾ ಸಮೀಪದ ಅರಣ್ಯವನ್ನು ಸುತ್ತುವರಿದು ಕೂಂಬಿಂಗ್‌ ನಡೆಸುತ್ತಿದ್ದಾಗ ಹೆಡ್‌ ಕಾನ್‌ಸ್ಟೆಬಲ ಎಲ್ಲಪ್ಪ ಕೊಪ್ಪದ ಅವರು ಪ್ರಶರ್‌ ಬಾಂಬ್‌ ಮೇಲೆ ಕಾಲಿರಿಸಿದರು. ಅದು ಸ್ಫೋಟಗೊಂಡು ಅವರು ಗಾಯಗೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next