Advertisement

ರಾಧಿಕಾ ಮನೆಗೂ ಐಟಿ ದಾಳಿ ,ಯಶ್‌ ಮಾವನ ಕರೆದೊಯ್ದ ಅಧಿಕಾರಿಗಳು

11:09 AM Jan 03, 2019 | |

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಖ್ಯಾತ ನಟ ಯಶ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಪತ್ನಿ ರಾಧಿಕಾ ಪಂಡಿತ್‌ ಅವರ ಗಾಯತ್ರಿ ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. 

Advertisement

ಬೆಳ್ಳಂಬೆಳಗ್ಗೆ ಕತ್ರಿಗುಪ್ಪೆಯಲ್ಲಿರುವ ಯಶ್‌ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.ಹೊಸಕೆರೆ ಹಳ್ಳಿ ಯಲ್ಲಿರುವ ಯಶ್‌ ಅವರ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ. 

ಮಧ್ಯಾಹ್ನ ರಾಧಿಕಾ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು ರಾಧಿಕಾ ತಂದೆಯನ್ನು ಇನ್ನೋವಾ ಕಾರಿನಲ್ಲಿ ಕರೆದೊಯ್ದಿದ್ದಾರೆ. ಯಾಕೆ ಕರೆದೊಯ್ದಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. 

ಮುಂಬಯಿಯಲ್ಲಿದ್ದ ಯಶ್‌ ಅವರು ಐಟಿ ದಾಳಿ ನಡೆದ ಬಳಿಕ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಸಂಜೆ 4 ಗಂಟೆಯ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. 

ಕೆಜಿಎಫ್ ಚಿತ್ರದ ಭಾರೀ ಯಶಸ್ಸಿನ ಬಳಿಕ ಈ ದಾಳಿ ನಡೆದಿದ್ದು , ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ನಿವಾಸದ ಮೇಲೂ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. 

Advertisement

ಗುರುವಾರ ಬೆಳಗ್ಗೆ  ಸ್ಯಾಂಡಲ್‌ವುಡ್‌ ಇತಿಹಾಸದಲ್ಲೆ ಮೊದಲು ಎನ್ನುವ ಹಾಗೆ ಏಕ ಕಾಲಕ್ಕೆ ಐಟಿ ಅಧಿಕಾರಿಗಳು ನಾಲ್ವರು ದಿಗ್ಗಜ ನಟರು ಮತ್ತು ಬಿಗ್‌ ಬಜೆಟ್‌ ಚಿತ್ರಗಳನ್ನು ನಿರ್ಮಿಸಿದ್ದ ನಾಲ್ವರು ನಿರ್ಮಾಪಕರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

ಖ್ಯಾತ ನಟ ಶಿವರಾಜ್‌ ಕುಮಾರ್‌,ನಟ ಪುನೀತ್‌ ರಾಜ್‌ಕುಮಾರ್‌,ಕಿಚ್ಚ ಸುದೀಪ್‌, ಯಶ್‌, ನಿರ್ಮಾಪಕರಾದ  ರಾಕ್‌ಲೈನ್‌ ವೆಂಕಟೇಶ್‌,  ಜಯಣ್ಣ, ಎಂಎಲ್‌ಸಿ ಸಿ.ಆರ್‌ ಮನೋಹರ್‌, ಕೆಜಿಎಫ್ ಖ್ಯಾತಿಯ ವಿಜಯ್‌ ಕಿರಗಂದೂರು ಸೇರಿ  ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next