Advertisement

ಆರು ಕಡೆ ಐಟಿ ದಾಳಿ: ದಾಖಲೆಗಳ ಪರಿಶೀಲನೆ

09:30 AM Oct 06, 2017 | Karthik A |

ಹುಬ್ಬಳ್ಳಿ: ನಗರದಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಚಿನ್ನದ ವ್ಯಾಪಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ತೆರಿಗೆ ಅಧಿಕಾರಿಗಳು (ಐಟಿ) ಗುರುವಾರ ಬೆಳಗ್ಗೆ ಏಕಕಾಲಕ್ಕೆ ಆರು ಕಡೆ ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳ ದಾಖಲೆ ಪತ್ರಗಳನ್ನು ಪರಿಶೀಲಿಸಿದರು.

Advertisement

ಗೋವಾ-ಕರ್ನಾಟಕ ವಲಯದ ತೆರಿಗೆ ಅಧಿಕಾರಿಗಳು ಜಂಟಿ ಆಯುಕ್ತರ ನೇತೃತ್ವದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಚಿನ್ನದ ವ್ಯಾಪಾರಿಗಳಾದ ದಿಲೀಪ್‌ ತಿಲೇಸರಾ, ರಾಜು ಪಟಾಡಿಯಾ ಕಚೇರಿ, ನಿವಾಸ ಹಾಗೂ ಇವರ ರಿಯಲ್‌ ಎಸ್ಟೇಟ್‌ ವ್ಯವಹಾರದ ಪಾಲುದಾರರ ಮನೆ ಮೇಲೂ ದಾಳಿ ನಡೆಸಿದರು ಎಂದು ತಿಳಿದು ಬಂದಿದೆ. ದಿಲೀಪ್‌ ತಿಲೇಸರಾ ಪಾಲುದಾರಿಕೆಯ ನಗರದ ಕೊಪ್ಪಿಕರ ರಸ್ತೆಯ ಸೆಟ್‌ಲೈಟ್‌ ಕಾಂಪ್ಲೆಕ್ಸ್‌, ಮನೋಜ್‌ ಜುವೆಲರ್ಸ್‌, ನೀಲಿಜಿನ್‌ ರಸ್ತೆಯ ತಿರುಮಲ ಟ್ರೇಡ್‌ ಸೆಂಟರ್‌ ಮತ್ತು ಸನ್‌ಸಿಟಿ ಡೆವಲಪರ್ಸ್‌ ಕಚೇರಿ ಮೇಲೆ ಹಾಗೂ ರಾಜು ಪಟಾಡಿಯಾ ಅವರ ಡೈಮಂಡ್‌ ಜುವೆಲರ್, ನಿವಾಸ, ಕಚೇರಿ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ಪತ್ರಗಳನ್ನು ಪರಿಶೀಲಿಸಿ, ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಚೆನ್ನೈ, ತೆಲಂಗಾಣ, ಗೋವಾದಿಂದ ಆಗಮಿಸಿದ್ದ ಅಧಿಕಾರಿಗಳು ಪ್ರತ್ಯೇಕವಾಗಿ 4 ತಂಡಗಳಾಗಿ ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next