Advertisement

ಯಶ್‌ ಮನೆಯಲ್ಲಿ  ಐಟಿ ಪರಿಶೀಲನೆ ಅಂತ್ಯ ; ರಾಕಿ ಭಾಯ್‌ ಹೇಳಿದ್ದೇನು? 

10:09 AM Jan 05, 2019 | Team Udayavani |

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗಿನಿಂದ ಆರಂಭಿಸಿದ್ದ ದಾಖಲೆಗಳ ಪರಿಶೀಲನೆಯನ್ನು ಶನಿವಾರ ಮಧ್ಯಾಹ್ನ ಅಂತ್ಯಗೊಳಿಸಿದ್ದಾರೆ. 

Advertisement

ಐಟಿ ಅಧಿಕಾರಿಗಳು ತೆರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್‌ ದಾಳಿ ವಿಜಯ್‌ ಕಿರಗಂದೂರು ಅವರ ವಿಚಾರದಲ್ಲಿ ಆಗಿದೆ. ಐಟಿ ಅವರು ಅವರ ಕರ್ತವ್ಯ ಮಾಡಿದ್ದಾರೆ. ಸರ್ಕಾರಿ ಸಂಸ್ಥೆ ಯಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ.ಇಲ್ಲದಿರುವ ಊಹಾಪೋಹಗಳು ಬೇಡ, ಬಣ್ಣ ಕೊಡುವುದು ಬೇಡ ಎಂದರು. 

ನಮ್ಮನ್ನು ಕೇಳಿದ್ದಕ್ಕೆ ಉತ್ತರ ನೀಡಿದ್ದೇವೆ. ನೋಟು ಎಣಿಸುವ ಯಂತ್ರ ಮನೆಗೆ ತಂದಿಲ್ಲ ಅದು ಪ್ರಿಂಟರ್‌ಗಳು ಎಂದು ನಗೆಯಾಡಿದರು. 

ಮಹಾನುಭಾವ ಮಾಧ್ಯಮದವರು ತುಂಬಾ ಜೋರಾಗಿ ಮಾಡ್ತಾ ಇದ್ದಾರೆ. ಅವರು  ಮನಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಲಿ. 
ನಾನು ಚಿಟ್‌ಫ‌ಂಡೂ ನಡೆಸಿಲ್ಲ ನನ್ನ ಜೀವನದಲ್ಲಿ ಅಂತಹದ್ಧನ್ನು ಮಾಡೇ ಇಲ್ಲ 
ಎಂದು ಕಿಡಿಯಾದರು. 

2 ದಿನ ನನ್ನ ಹೆಂಡತಿ ಮತ್ತು ಮಗುವನ್ನು ನೋಡಲಿಕ್ಕೆ ಆಗ್ಲಿಲ್ಲಾ  ಅನ್ನುವುದೇ ಬೇಸರ ಅಷ್ಟೇ  ಎಂದರು. 

Advertisement

ಅಮ್ಮ , ರಾಧಿಕಾ, ಅವರ ಮನೆಯವರು ಎಲ್ಲರನ್ನೂ ವಿಚಾರಿಸಿದ್ದಾರೆ ಉತ್ತರ ನೀಡಿದ್ದೇವೆ. ಯಾವುದೇ ಗೊಂದಲಗಳು ಬೇಡ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next