– ಹೀಗೆ ನಿರ್ದೇಶಕ ಆರ್.ಚಂದ್ರು ಅವರನ್ನು ಪ್ರೀತಿಯಿಂದ ಹೊಗಳಿದರು “ದುನಿಯಾ’ ವಿಜಯ್.
Advertisement
“ಅವರು ಡಬ್ಬಲ್ ಗುಂಡಿಗೆ ಇರುವಂತಹ ವ್ಯಕ್ತಿ. ದೂರದಿಂದ ಬೇರೆ ರೀತಿ ಕಾಣಾ¤ರೆ. ಹತ್ತಿರ ಹೋದರೆ ಅವರಲ್ಲಿ ಹೊಸ ಜಗತ್ತೇ ಕಾಣತ್ತೆ …’– ಹೀಗೆ ನಟ “ದುನಿಯಾ ವಿಜಯ್’ ಅವರನ್ನು ಅಷ್ಟೇ ಪ್ರೀತಿಯಿಂದ ಹೊಗಳಿದರು ಆರ್.ಚಂದ್ರು.
Related Articles
Advertisement
“ಪ್ರಶಾಂತವಾದ ಜಾಗದಲ್ಲಿ ಕಥೆ ಚರ್ಚೆ ಮಾಡೋಕೆ ಅಂತ ಮುತ್ತತ್ತಿ ಫಾರೆಸ್ಟ್ ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದೆವು. ಆಗ ದುನಿಯಾ ವಿಜಯ್, ಅಲ್ಲಿದ್ದ ಫಾರೆಸ್ಟ್ ಗಾರ್ಡ್ನ ಕರೆದು, “ಇಲ್ಲಿ, ಹೆಚ್ಚಾಗಿ ಹುಲಿ, ಚಿರತೆ ಎಲ್ಲಿ ಓಡಾಡುತ್ತವೆ. ಆ ಜಾಗ ಯಾವುದು’ ಅಂತ ಕೇಳಿದರು. ಆಗ, ಆತ ಒಂದು ಕಾಡಿನ ಮೂಲೆಯತ್ತ ಬೆರಳು ತೋರಿಸಿ, “ಅಲ್ಲಿ ಹೆಚ್ಚು ಚಿರತೆ ಓಡಾಡುತ್ತವೆ. ಆದರೆ, ಅಲ್ಲಿಗೆ ಹೋಗುವಂತಿಲ್ಲ ಅಂತ ಹೇಳಿ ಮಂದೆ ಹೋದ. ಆಗ ವಿಜಿ ಸರ್, ಇವತ್ತು ರಾತ್ರಿ ನಾವು ಹುಲಿ, ಚಿರತೆ ಓಡಾಡುವ ಜಾಗದಲ್ಲೇ ಮಲಗ್ತಿàವಿ. ಆ ಜಾಗದಲ್ಲಿದ್ದರೆ ಹೊಸ ಫೀಲ್ ಆಗುತ್ತೆ ಅಂದರು. ನನಗೆ ಆಗ ಭಯ ಆಗಿದ್ದು ನಿಜ. ಆದರೂ, ಆಯ್ತು ಅಂತ ಹೇಳಿದೆ. ರಾತ್ರಿ 11 ಕ್ಕೆ ರೆಡಿಯಾದ್ವಿ. ಆಗ ಒಬ್ಬ ಫಾರೆಸ್ಟ್ ಗಾರ್ಡ್ ಬಂದು, ಸಾರ್ ಇವತ್ತು ಅಮವಾಸ್ಯೆ ಅಲ್ಲಿಗೆ ಹೋಗೋದು ಬೇಡ ಅಂತ ಹೇಳಿದ. ಹಾಗಾಗಿ, ಅಲ್ಲಿ ಹೋಗಿ ಮಲಗುವುದು ತಪ್ಪಿತು. ವಿಜಿ ಸರ್ಗೆ ಇಂಥಾ ಧೈರ್ಯವೂ ಇದೆ. ಅದಕ್ಕೆ ಹೇಳಿದ್ದು ಅವರೊಂದಿಗೆ ಇದ್ದರೆ ಬೇರೆ ಜಗತ್ತು ಕಾಣುತ್ತೆ ಅಂತ’ ಎಂದು ಹೇಳಿದರು ಚಂದ್ರು.
ಡಿಫರೆಂಟ್ ಡ್ಯಾನಿ ಅವರು “ದುನಿಯಾ’ ಸಿನಿಮಾದಲ್ಲಿ ವಿಜಯ್ ಜತೆ ಮಾಡಿದ ಕೆಲಸ ನೆನಪಿಸಿಕೊಂಡರು. “ಉಗ್ರಂ’ ಮಂಜು ಕೂಡ ವಿಜಯ್ ಅವರನ್ನು ಹೊಗಳಿದರು. “ಮೊದಲು ನಾನು ಸೆಟ್ ವರ್ಕ್ ಮಾಡುವಾಗ, ಕೆಲವರು ಹೋಗೋ ಬಾರೋ ಅನ್ನುತ್ತಿದ್ದರು. ಆಗ, ವಿಜಯ್ ಅವರು ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಅದು ಅವರ ದೊಡ್ಡಗುಣ’ ಅಂದರು “ಉಗ್ರಂ’ ಮಂಜು. ಕ್ಯಾಮೆರಾಮೆನ್ ಸತ್ಯ ಹೆಗಡೆ “ಕನಕ’ ಬಗ್ಗೆ ಹೆಚ್ಚೇನೂ ಮಾತಾಡಲಿಲ್ಲ. ಅಷ್ಟೊತ್ತಿಗೆ ಮಾತುಕತೆಗೂ ಬ್ರೇಕ್ ಬಿತ್ತು.