Advertisement

ರಾಜಕಾರಣದ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ, ರಾಜಕೀಯವೇ ಬೇಡವೆನಿಸುತ್ತಿದೆ: ರೇಣುಕಾಚಾರ್ಯ

11:51 AM Jul 08, 2021 | Team Udayavani |

ಬೆಂಗಳೂರು: ಇಂದಿನ ರಾಜಕಾರಣದ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ. ಈ ರಾಜಕಾರಣವೇ ಬೇಡ ಎನಿಸಿದೆ. ಅಷ್ಟು ಮನಸ್ಸಿಗೆ ನೋವಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.

Advertisement

ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದಗೌಡರನ್ನು ಕ್ಯಾಬಿನೆಟ್‌ನಿಂದ ಕೈ ಬಿಟ್ಟ ಕಾರಣ ಅವರು ರಾಜ್ಯ ರಾಜಕಾರಣದತ್ತ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, “ನಾನು ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಮಾತನ್ನಾಡುವವಷ್ಟು ದೊಡ್ಡವನು ಅಲ್ಲ. ನನ್ನ ಕ್ಷೇತ್ರದ ಬಗ್ಗೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ. ಕೋವಿಡ್-19 ಬಗ್ಗೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಇದನ್ನೂ ಓದಿ:ಜುಲೈನಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ 12 ಕೋಟಿ ಕೋವಿಡ್ ಲಸಿಕೆ ಪಡೆಯಲಿವೆ: ಕೇಂದ್ರ

ದೆಹಲಿಗೆ ಬಿಜೆಪಿ ಶಾಸಕರ ನಿಯೋಗ ಕೊಂಡ್ಯೊಯ್ಯುವ ವಿಚಾರವಾಗಿ ಮಾತನಾಡಿದ ಅವರು, “ಪಕ್ಷದ ಬಗ್ಗೆ, ನಾಯಕರ ಬಗ್ಗೆ ಅವರ ವಿರುದ್ಧ ಮಾತನ್ನಾಡುವವರನ್ನು ಕೇಂದ್ರದ ನಾಯಕರು ಗಮನಿಸುತ್ತಾರೆ. ಯಾರೆಲ್ಲಾ ಮಾತನ್ನಾಡುತ್ತಾರೆಯೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಕೇಂದ್ರದ ಬಳಿ ನಿಯೋಗ ಕೊಂಡ್ಯೊಯ್ಯಬೇಕೇ, ಬೇಡವೇ ಎಂಬುದನ್ನು ಚರ್ಚಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next