Advertisement

ಇಡೀ ರಾಜ್ಯಸಭೆಗೆ ಗೌರವ ತಂದಿದೆ: ಸಿ.ಟಿ. ರವಿ

12:28 AM Jul 09, 2022 | Team Udayavani |

ಬೆಂಗಳೂರು: ಡಾ| ವೀರೇಂದ್ರ ಹೆಗ್ಗಡೆ ಅವರ ರಾಜ್ಯಸಭಾ ನಾಮ ನಿರ್ದೇಶನದಿಂದ ಇಡೀ ರಾಜ್ಯಸಭೆಗೆ ಗೌರವ ಪ್ರಾಪ್ತಿಯಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಶುಕ್ರವಾರ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಡಾ| ಹೆಗ್ಗಡೆ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಕೆಲವರಿಗೆ ರಾಜ್ಯಸಭೆಯ ಸ್ಥಾನದಿಂದ ಗೌರವ ಹೆಚ್ಚುತ್ತದೆ. ಆದರೆ ಡಾ| ವೀರೇಂದ್ರ ಹೆಗ್ಗಡೆ ಅಂಥವರ ನೇಮಕದಿಂದ ಇಡೀ ರಾಜ್ಯಸಭೆಯ ಗೌರವ ಹೆಚ್ಚುತ್ತದೆ. ಡಾ| ಹೆಗ್ಗಡೆ ಅವರ ಅನುಭವ ದೇಶಕ್ಕೆ ಸಿಗಲಿ ಎಂದರು.

ಸಾಧಕರಿಗೆ ಗೌರವ
ಪದ್ಮ ಪ್ರಶಸ್ತಿ ವಿಚಾರದಲ್ಲೂ ಪ್ರಧಾನಿ ನರೇಂದ್ರ ಮೋದಿ ಇದೇ ರೀತಿ ಆಯ್ಕೆ ಮಾಡಿದ್ದರು. ಕನ್ನಡ ನಾಡಿನ ಸಾಧಕರಾದ ಸುಕ್ರಿ ಬೊಮ್ಮ ಗೌಡ, ಸಾಲು ಮರದ ತಿಮ್ಮಕ್ಕ ಸಹಿತ ಹಲವರ ಹೆಸರನ್ನು ಯಾರೂ ಶಿಫಾರಸು ಮಾಡಿರಲಿಲ್ಲ. ಆದರೆ ಪ್ರಧಾನಿಯೇ ಎಲೆಮರೆಯ ಸಾಧಕರನ್ನು ಗುರುತಿಸಿದರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next