Advertisement

“ಬಿಜೆಪಿಯಲ್ಲಿರುವವರ ಮೇಲೆ ಐಟಿ ದಾಳಿ ಯಾಕಿಲ್ಲ’: ನಟ ಪ್ರಕಾಶ್‌ ರಾಜ್‌

01:14 AM Mar 19, 2024 | Team Udayavani |

ಮಂಗಳೂರು: ಬೇರೆ ಪಕ್ಷದಲ್ಲಿದ್ದಾಗ ಐಟಿ, ಇಡಿ ದಾಳಿ ನಡೆದು ಬಿಜೆಪಿ ಸೇರಿದರೆ ಅಂತಹವರು ಭ್ರಷ್ಟಾಚಾರ ಮುಕ್ತರಾಗುವುದು ಹೇಗೆ? ಇತರ ಪಕ್ಷದ ನಾಯಕರ ಮೇಲೆ ನಡೆಯುವಂತೆ ಬಿಜೆಪಿ ನಾಯಕರ ಮೇಲೆ ಐಟಿ ದಾಳಿ ಯಾಕೆ ನಡೆ ಯುತ್ತಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣ ಬಾಂಡ್‌ ಕುರಿತಂತೆ ಪ್ರಧಾನಿ ಮೋದಿ ಮೌನವಾಗಿ ದ್ದಾರೆ. ಮನ್‌ ಕಿ ಬಾತ್‌ನಲ್ಲಿ ಈ ಬಗ್ಗೆಯೂ ಮಾತನಾಡಿಲ್ಲ ಎಂದರು.

ಡಿಎಂಕೆ ಸೇರಿದಂತೆ ಹಲವು ಪಕ್ಷ ದವರು ಇಂತಹ ಕಂಪೆನಿಗಳಿಂದ ಬಾಂಡ್‌ ಪಡೆದಿರುವುದಾಗಿ ಹೇಳಿ ಕೊಂಡಿ ದ್ದಾರೆ. ಬಿಜೆಪಿಯವರು ಯಾಕೆ ಯಾರಿಂದ ಪಡೆದಿದ್ದಾಗಿ ಹೇಳುತ್ತಿಲ್ಲ. ಬಿಜೆಪಿ ಪಡೆದಿರುವ ಬಾಂಡ್‌ ಹಣ ವೆಲ್ಲಾ ದಾಳಿಯ ಬಳಿಕ ಸಂಗ್ರಹಿಸಿ ದ್ದಾಗಿದೆ. ಕಂಪೆನಿಯೊಂದು 500 ಕೋಟಿ ರೂ. ಲಂಚ ಕೊಟ್ಟು, ಆತನಿಗೆ ಒಂದೂವರೆ ಸಾವಿರ ಕೋಟಿ ಅಥವಾ 2 ಸಾವಿರ ಕೋಟಿ ನೀವು ಗುತ್ತಿಗೆ ಕೊಡುತ್ತೀರಿ ಅಂದರೆ, ಆ ಗುತ್ತಿಗೆ ಹಣ ಜನರ ದುಡ್ಡಲ್ಲವೇ? ಎಂದು ಪ್ರಕಾಶ್‌ ರಾಜ್‌ ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವು ದಿಲ್ಲ. ಒಂದು ಸಲ ನೋಡಿ ಆಗಿದೆ. ಜನರ ಧ್ವನಿ ಯಾಗಿ ರೋದು ಮುಖ್ಯ ಎನ್ನುವ ಕಾರಣಕ್ಕೆ ನಾನು ಜನರ ಬಳಿ ಇರುತ್ತೇನೆ. ಇಂಥ ರಾಜ ಕಾರಣ ಪ್ರಶ್ನಿಸುತ್ತೇನೆ. ನನ್ನ ಚಿಂತನೆ ಮಂಡಿಸುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next