Advertisement

Mandya ಅಮ್ಮನ ನಿರ್ಧಾರದ ಜತೆ ಇರುತ್ತೇನೆ: ನಟ ದರ್ಶನ್‌

11:17 PM Apr 03, 2024 | Team Udayavani |

ಮಂಡ್ಯ: ಅಮ್ಮ ಸುಮಲತಾ ಅವರು ಪಕ್ಷೇತರ ಸಂಸದೆಯಾಗಿ ಇಷ್ಟೊಂದು ಕೆಲಸ ಮಾಡಿದ್ದಾರೆ. ಅಮ್ಮ ಏನೇ ನಿರ್ಧಾರ ಮಾಡಿದರೂ ಅವರ ಜತೆಗಿರುತ್ತೇನೆ ಎಂದು ನಟ ದರ್ಶನ್‌ ಹೇಳಿದರು.

Advertisement

ಸುಮಲತಾ ಬೆಂಬಲಿಗರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 5 ವರ್ಷದ ಹಿಂದೆ ಪ್ರಚಾರ ಮಾಡುವಾಗ ಜನ ನಮಗೆ ಪ್ರೀತಿ ಕೊಟ್ಟಿದ್ದರು. ಕಳೆದ ಚುನಾವಣೆ ವೇಳೆ ಬಲಗೈ ಮುರಿದಿತ್ತು. ಈಗ ಎಡಗೈ ಪೆಟ್ಟಾಗಿದೆ. ಶಸ್ತ್ರ ಚಿಕಿತ್ಸೆಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಬಂದಿದ್ದೇನೆ ಎಂದ ಅವರು, ತಾಯಿ ಯಾವತ್ತಿದ್ದರೂ ತಾಯಿನೇ. ಅಮ್ಮನ ನಿರ್ಧಾರಕ್ಕೆ ನಾನು ನನ್ನ ತಮ್ಮ (ಅಭಿಷೇಕ್‌) ಬದ್ಧರಾಗಿದ್ದೇವೆ. ಹಾಳು ಬಾವಿಗೆ ಅವರು ಬೀಳು ಎಂದರೂ ಬೀಳುತ್ತೇನೆ. ಆ ಮನೆ ನಮಗೆ ಅಷ್ಟು ಪ್ರೀತಿ ಕೊಟ್ಟಿದೆ ಎಂದರು.

ಸಂಸದೆ ಸುಮಲತಾ ಪುತ್ರ ಅಭಿಷೇಕ್‌ ಅಂಬರೀಶ್‌ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ನಿರ್ಧಾರ ಮಾಡಿದ್ದಾರೆಂದು ಹೇಳಿದರು. ನಾವು ಚುನಾವಣೆಯಲ್ಲಿ ಸೋತರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಆದರೆ, ನಾವು ಸೋತಿಲ್ಲ. ಈಗಲೂ ಜನ ನಮ್ಮ ಪರವಿದ್ದಾರೆ. ಹಾಗಾಗಿ ಜನರಿಗೆ ಒಳ್ಳೆಯದಾಗಲು ಕೆಲ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next