Advertisement

ಈಶ್ವರಮಂಗಲ: ಹರತಾಳ ಯಶಸ್ವಿ

03:11 PM Feb 26, 2017 | |

ಈಶ್ವರಮಂಗಲ : ಕೇರಳ ಸಿಎಂ ಪಿಣರಾಯಿ ವಿಜಯನ್‌ ಮಂಗಳೂರಿನಲ್ಲಿ ನಡೆಸಿದ ಕೋಮು ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರದ ಸಂಘಟನೆಗಳು ಕರೆ ನೀಡಿದ ಹರತಾಳ ಗಡಿಭಾಗವಾದ ಈಶ್ವರಮಂಗಲದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

Advertisement

ಬೆಳಗ್ಗೆಯಿಂದಲೇ ಪೇಟೆಯ ವರ್ತಕರು ಅಂಗಡಿಮುಗ್ಗಟ್ಟು ಮುಚ್ಚಿದ್ದರು. ಹಾಲು, ಔಷಧ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಸರಕಾರಿ ಬಸ್‌ಗಳಲ್ಲಿ  ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಪಿಯುಸಿ ಪರೀಕ್ಷೆಗಳು ನಿಗದಿಯಂತೆ ನಡೆದವು. ಸುಳ್ಯಪದವು ಪ್ರದೇಶದಲ್ಲಿ ಹರತಾಳಕ್ಕೆ ಬೆಂಬಲವಿಲ್ಲದೇ ಯಥಾಸ್ಥಿತಿ ಇತ್ತು. ಪುತ್ತೂರು ಗ್ರಾಮಾಂತರ ಪೊಲೀಸ್‌ ಅಧಿಕಾರಿಗಳು, ಈಶ್ವರಮಂಗಲ ಹೊರಠಾಣೆಯ ಪೊಲೀಸ್‌ ಅಧಿಕಾರಿಗಳು ಬಿಗಿಬಂದೋಬಸ್ತಿನಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next