Advertisement

ಒಂದೇ ವಾರದಲ್ಲಿ ಶಾಸಕರಿಂದ ಹಕ್ಕುಪತ್ರ ವಿತರಣೆ

11:07 AM Jul 08, 2018 | Team Udayavani |

ಕಾವೂರು : ಇಲ್ಲಿನ ಆಕಾಶ ಭವನ ಸೂಜಿಕಲ್ಲು ಗುಡ್ಡ ಎಂಬಲ್ಲಿ ಮೂವತ್ತೈದು ವರ್ಷಗಳಿಂದ ಪ್ಲಾಸ್ಟಿಕ್‌ ಡೇರೆಯಲ್ಲಿ ವಾಸಿಸುತ್ತಿದ್ದ ಬೇಬಿ ಮತ್ತು ಅವರ ಕುಟುಂಬಕ್ಕೆ ಒಂದೇ ವಾರದಲ್ಲಿ ಹಕ್ಕುಪತ್ರ ನೀಡುವುದಾಗಿ ಭರವಸೆ ಯಿತ್ತಿದ್ದ ಶಾಸಕ ಡಾ| ವೈ. ಭರತ್‌ ಶೆಟ್ಟಿ ಶನಿವಾರ ಭೇಟಿ ನೀಡಿ ಹಕ್ಕು ಪತ್ರ ವಿತರಿಸಿದರು.

Advertisement

ಜು. 2ರಂದು ಭೇಟಿ ನೀಡಿ ಈ ಕುಟುಂಬ ವಾಸಿಸುತ್ತಿದ್ದ ಸ್ಥಿತಿ ಕಂಡು ತುಂಬಾ ಖೇದವಾಗಿತ್ತು. ತತ್‌ಕ್ಷಣ ಒಂದು ವಾರದಲ್ಲಿ ಹಕ್ಕು ಪತ್ರ ಸಿದ್ಧಪಡಿಸುವಂತೆ ಕಂದಾಯ ಅಧಿ ಕಾರಿಗಳಲ್ಲಿ ಸೂಚಿಸಿದ್ದೆ. ಕೊಟ್ಟ ಮಾತಿನಂತೆ ವಿತರಿಸಿದ್ದೇನೆ ಎಂದರು. ಮಳೆಗಾಲ ಮುಗಿದ ತತ್‌ಕ್ಷಣ ಪರಿಶಿಷ್ಟ ಜಾತಿ, ಪಂಗಡಕ್ಕೆ ಸಿಗುವ ಅನುದಾನದಡಿ ಮನೆ ನಿರ್ಮಿಸಿಕೊಡಲಾಗುವುದು. ಈ ಬಗ್ಗೆ ಕಂದಾಯ ಅಧಿಕಾರಿ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಕೃತಜ್ಞತೆ ಅರ್ಪಿಸಿದ ಬೇಬಿ ಅವರು, ಇಷ್ಟು ಬೇಗ ನಮ್ಮ ಭೂಮಿ, ಕನಸು ನನಸಾಗುವುದೆಂದು ತಿಳಿದಿರಲಿಲ್ಲ. ಇದೀಗ ನಮಗೆ ಶಾಸಕರು ಹಕ್ಕು ಪತ್ರ ಕೊಟ್ಟಿದ್ದಾರೆ. ಮನೆಯೂ ಬೇಗ ಸಿಗುವ ಆಶಾಭಾವ ಹೊಂದಿದ್ದೇವೆ ಎಂದರು. ಕಂದಾಯ ಅಧಿಕಾರಿ ನವೀನ್‌ ಅವರ ಸೇವಾ ಬದ್ಧತೆಯನ್ನು ಶಾಸಕರು ಇದೇ ಸಂದರ್ಭ ಪ್ರಶಂಸಿಸಿದರು. ಸುಚೇತನ್‌, ಆನಂದ ಪಾಂಗಳ, ಭರತ್‌ ರಾಜ್‌, ಸೋಮನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next