Advertisement

ಸಹಾಯಧನ ಚೆಕ್‌ ವಿತರಣೆ

09:09 PM Dec 28, 2021 | Girisha |

ಹೂವಿನಹಿಪ್ಪರಗಿ: ಕುದರಿ ಸಾಲವಾಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಅಕಾಲಿಕವಾಗಿ ಮರಣಹೊಂದಿದರೆಅವರಕುಟುಂಬಕ್ಕೆ ಸಹಾಯಾರ್ಥವಾಗಿ 10 ಸಾವಿರ ರೂ. ನೀಡಲಾಗುವುದು ಎಂದು ಪಿಕೆಪಿಎಸ್‌ ಮಾಜಿ ಅಧ್ಯಕ್ಷ ಜೆಡಿಎಸ್‌ ಧುರೀಣ ರಾಜುಗೌಡ ಪಾಟೀಲ ಹೇಳಿದರು.

Advertisement

ಬೂದಿಹಾಳ ಗ್ರಾಮದ ನಿವಾಸಿ ಪಿಕೆಪಿಎಸ್‌ ಸದಸ್ಯ ಶಂಕರಗೌಡ ಬಿರಾದಾರ ಹಾಗೂ ನಿಂಗಪ್ಪ ಹರಿಜನ ಅವರು ಅಕಾಲಿಕ ನಿಧನ ಹೊಂದಿದ್ದರಿಂದ ಕುದರಿ ಸಾಲವಾಡಗಿ ಗ್ರಾಮದ ಪಿಕೆಪಿಎಸ್‌ ವತಿಯಿಂದ ತಲಾ 10 ಸಾವಿರ ರೂ. ಸಹಾಯ ಧನ ನೀಡಿ ಅವರು ಮಾತನಾಡಿದರು. ಸಂಘದ ವ್ಯಾಪ್ತಿಗೆ ಬರುವ ಕುದರಿ ಸಾಲವಾಡಗಿ, ಬೂದಿಹಾಳ, ಕಾಮನಕೇರಿ, ಗುಳಬಾಳ ಹಾಗೂ ರಾಮನಹಟ್ಟಿ ಗ್ರಾಮದ ರೈತರು ನಮ್ಮ ಸಂಘದಲ್ಲಿಬೆಳೆ ಸಾಲಪಡೆದಯಾವುದೇ ರೈತರು ಮೃತಪಟ್ಟರೆ ಅವರ ಕುಟುಂಬಕ್ಕೆ 10 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಹೇಳಿದರು.

ಅಧ್ಯಕ್ಷ ಅನಿಲಗೌಡ ಪಾಟೀಲ, ಗುರನಗೌಡ ಪಾಟೀಲ, ಸೋಮನಗೌಡ ಪಾಟೀಲ, ಸದಪ್ಪಗೌಡ ರೋಡಗಿ, ಭೀಮನಗೌಡ ಪಾಟೀಲ, ಎಂ.ವ್ಹಿ. ಅಣ್ಣಪ್ಪನವರ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅನಿಲಕುಮಾರ ದೇಸಾಯಿ ಹಾಗೂ ಸಿಬ್ಬದಿ ಹಾಜರಿದ್ದರು

 

Advertisement

Udayavani is now on Telegram. Click here to join our channel and stay updated with the latest news.

Next