Advertisement

Gaza; ಶತ್ರುಗಳೆಂದು ಭಾವಿಸಿ ಒತ್ತೆಯಾಳುಗಳನ್ನೇ ಕೊಂದ ಇಸ್ರೇಲ್ ಪಡೆ

08:31 AM Dec 16, 2023 | Team Udayavani |

ಜೆರುಸಲೇಂ: ಗಾಜಾದಲ್ಲಿ ಇಸ್ರೇಲ್ ದಾಳಿ ಮುಂದುವರಿದಿದೆ. ಈ ನಡುವೆ ಶನಿವಾರ ಮೂರು ಇಸ್ರೇಲಿ ಒತ್ತೆಯಾಳುಗಳನ್ನೇ ಪಡೆಗಳು ತಪ್ಪಾಗಿ ಹೊಡೆದುರುಳಿಸಿದೆ. ಅವರು ಒತ್ತೆಯಾಳುಗಳನ್ನು ಶತ್ರುಗಳು ಎಂದು ತಪ್ಪಾಗಿ ಗ್ರಹಿಸಿ ಗುಂಡು ಹಾರಿಸಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಟ್ವಿಟರ್ ನಲ್ಲಿ ಹೇಳಿಕೊಂಡಿದೆ.

Advertisement

ಆಕಸ್ಮಿಕ ಹತ್ಯೆಯನ್ನು ಅಸಹನೀಯ ದುರಂತ ಎಂದು ಕರೆದಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರೊಂದಿಗೆ ಒತ್ತೆಯಾಳು ಮಾತುಕತೆಯನ್ನು ಪುನರಾರಂಭಿಸಲು ಮೊಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯಾ ಅವರನ್ನು ಯುರೋಪ್‌ ಗೆ ಕಳುಹಿಸಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.

ಏಳು ದಿನಗಳ ಕದನ ವಿರಾಮವು ಹಠಾತ್ತಾಗಿ ಕೊನೆಗೊಂಡ ನಂತರ ಹಿರಿಯ ಇಸ್ರೇಲಿ ಮತ್ತು ಕತಾರ್ ಅಧಿಕಾರಿಗಳ ನಡುವಿನ ಮೊದಲ ಸಭೆಯಾಗಿದ್ದು, ಈ ವಾರಾಂತ್ಯದಲ್ಲಿ ಬಾರ್ನಿಯಾ ಅವರು ಅಲ್ ಥಾನಿಯನ್ನು ಭೇಟಿಯಾಗುವ ನಿರೀಕ್ಷೆಯಿದೆ.

ಈ ವಾರದ ಆರಂಭದಲ್ಲಿ ಒತ್ತೆಯಾಳು ಮಾತುಕತೆಗಾಗಿ ಕತಾರ್‌ನ ರಾಜಧಾನಿ ದೋಹಾಗೆ ಪ್ರಯಾಣಿಸದಂತೆ ನೆತನ್ಯಾಹು ಮೊಸಾದ್ ಮುಖ್ಯಸ್ಥರನ್ನು ನಿರ್ಬಂಧಿಸಿದ್ದರು. ಆದಾಗ್ಯೂ, ಅವರು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next