Advertisement

ಮಾ.24ರಂದು ದಾಳಿ, ತಾಕತ್ತಿದ್ದರೆ ತಡೆಯಿರಿ: ಯೋಗಿಗೆ ಐಸಿಸ್‌ ಬೆದರಿಕೆ

04:50 PM Mar 22, 2017 | Team Udayavani |

ವಾರಾಣಸಿ : ಇದೇ ಮಾರ್ಚ್‌ 24ರಂದು ಪೂರ್ವಾಂಚಲದಲ್ಲಿ ನಾವು ವಿನಾಶವನ್ನು ಉಂಟುಮಾಡಲಿದ್ದೇವೆ; ತಾಕತ್ತಿದ್ದರೆ ತಡೆಯಿರಿ’ ಎಂದು ಎಚ್ಚರಿಸುವ ಐಸಿಸ್‌ ಉಗ್ರ ಸಂಘಟನೆಯದ್ದೆಂದು ಹೇಳಲಾದ ಪತ್ರವೊಂದು ವಾರಾಣಸಿಯ ಮಿರ್ಜಾಮುರಾದ್‌ ನಲ್ಲಿ ಪತ್ತೆಯಾಗಿದ್ದು ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಈ ಮೂಲಕ ಹೊಸ ಉಗ್ರ ಸವಾಲೊಂದು ಎದುರಾಗಿದೆ.

Advertisement

ಐಸಿಸ್‌ ಸಹಿ ಇರುವ ಈ ಬೆದರಿಕೆ ಪತ್ರದಲ್ಲಿ  ಪಾಕಿಸ್ಥಾನ್‌ ಜಿಂದಾಬಾದ್‌ ಎಂಬ ಘೋಷಣೆಯೂ ಇದೆ.

ರಾಜ್ಯ ಪೊಲೀಸ್‌ ಇಲಾಖೆ ಮತ್ತು ಗುಪ್ತಚರ ದಳ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದೆ. ಕಾರಣ ಇದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸದೀಯ ಕ್ಷೇತ್ರದಲ್ಲೇ ಪತ್ತೆಯಾಗಿದೆ.

ಪೊಲೀಸರು ಈ ಬಗ್ಗೆ  ಅಪರಿಚಿತ ವ್ಯಕ್ತಿಗಳ ವಿರುದ್ಧ  ಕೇಸು ದಾಖಲಿಸಿಕೊಂಡಿದ್ದು ಸ್ಥಳೀಯರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಗ್ರಾಮಾಂತರ ಎಸ್‌ಪಿ ಆಶಿಶ್‌ ತಿವಾರಿ ದೃಢೀಕರಿಸಿದ್ದಾರೆ. 

ಈ ವರ್ಷದ ಆದಿಯಲ್ಲಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್‌ ಪರ್ರೀಕರ್‌ ಅವರನ್ನು ಕೊಲ್ಲುವ ಬೆದರಿಕೆಯ ಐಸಿಸ್‌ ಪತ್ರ ಪತ್ತೆಯಾಗಿತ್ತು. ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿರುವುದಕ್ಕೆ ವ್ಯಕ್ತವಾದ ಆಕ್ರೋಶ ಅದಾಗಿತ್ತೆಂದು ತಿಳಿಯಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next