Advertisement

ಕೈದಿಗಳಿಗೆ ಉಗ್ರ ತರಬೇತಿ

06:00 AM May 27, 2018 | |

ಇಸ್ಲಾಮಾಬಾದ್‌: ಗಡಿ ನಿಯಂತ್ರಣ ರೇಖೆ (ಎಲ್‌ಓಸಿ) ದಾಟಿ ಭಾರತದ ಸೈನಿಕರ ಮೇಲೆ ದಾಳಿ ನಡೆಸಲು ಪಾಕಿಸ್ಥಾನದ ವಿವಿಧ ಕಾರಾಗೃಹಗಳಲ್ಲಿರುವ ಡಕಾಯಿತರು, ಅಪರಾಧಿಗಳಿಗೆ ಐಎಸ್‌ಐ ತರಬೇತಿ ನೀಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. 

Advertisement

ಭಾರತದ ಸೈನಿಕರ ಮೇಲೆ ದಾಳಿ ಮಾಡಲು ಒಪ್ಪಿಕೊಳ್ಳುವವರ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವುದು, ನಗದು  ಬಹುಮಾನ ಸೇರಿ ಹಲವು ಆಮಿಷಗಳನ್ನೂ ಒಡ್ಡಲಾಗುತ್ತದೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸ್‌ ಇಂಟೆಲಿಜೆನ್ಸ್‌ (ಐಎಸ್‌ಐ)ಇದರ ನೇತೃತ್ವ ವಹಿಸಿಕೊಂಡಿದೆ. ಕಾರಾಗೃಹ ವಾಸಿಗಳಿಗೆ ಉಗ್ರಗಾಮಿತ್ವದ ತರಬೇತಿ ಮುಕ್ತಾಯವಾದ ಬಳಿಕ ಅವರನ್ನು ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬಿಎಟಿ)ಗೆ ನಿಯೋಜನೆ ಮಾಡಲಾ ಗುತ್ತದೆ. ಅವರೇ ಎಲ್‌ಓಸಿಯಾದ್ಯಂತ ದಾಳಿಗಳನ್ನು ನಡೆಸುತ್ತಾರೆ. ಈ ತಂಡದಲ್ಲಿ  ಉಗ್ರರೂ ಇದ್ದಾರೆ. ಒಂದು ವೇಳೆ ಭಾರತೀಯ ಸೇನಾಪಡೆಗಳು ಉಗ್ರರನ್ನು ಸೆರೆ ಹಿಡಿದರೆ ಸುಲಭವಾಗಿ ನುಣುಚಿ ಕೊಳ್ಳಬಹುದು ಎನ್ನುವುದು ಪಾಕ್‌ ಲೆಕ್ಕಾಚಾರ ಎನ್ನಲಾಗಿದೆ. 

ಮಾರ್ಚ್‌ನಲ್ಲಿ 34 ವರ್ಷದ ಯುವಕನನ್ನು ಪಂಜಾಬ್‌ನಲ್ಲಿ ದಸ್ತಗಿರಿ ಮಾಡಿದ ವೇಳೆ, ಆತ ಐಎಸ್‌ಐ ಪರ ಕೆಲಸ ಮಾಡುತ್ತಿದ್ದಾನೆ ಎಂಬುದು ಬಹಿರಂಗವಾಗಿತ್ತು. 2017ರ ಅಕ್ಟೋಬರ್ ನಲ್ಲಿ ಪಾಕಿಸ್ಥಾನ‌ ಸೇನೆ ಉಗ್ರಗಾಮಿ ಗಳ ಜತೆಗೆ ಕೈಜೋಡಿಸಿದ್ದ ವಿಚಾರವನ್ನು ಒಪ್ಪಿಕೊಂಡಿತ್ತು ಎಂಬ ಅಂಶ ವರದಿಯಾಗಿತ್ತು. ಜತೆಗೆ ಪಾಕಿಸ್ಥಾನ ಇಂಟೆಲಿಜೆನ್ಸ್‌ ಬ್ಯೂರೋ ಕೂಡ ಭಯೋತ್ಪಾದಕ ಸಂಸ್ಥೆಗಳ ಜತೆಗೆ ಕೈಜೋಡಿಸಿರುವುದು ಗೊತ್ತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next