Advertisement

ಹೋರಾಟ ಯಶಸ್ವಿಯಾಗಿದ್ದಕ್ಕೆ ಸಿದ್ದುಗೆ ಕಿರಿಕಿರಿ: ಈಶ್ವರಪ್ಪ

03:40 PM Feb 12, 2021 | Team Udayavani |

ಶಿವಮೊಗ್ಗ: ಎಸ್‌ಟಿ ಮೀಸಲಾತಿಗಾಗಿ ಕುರುಬ ಸಮುದಾಯ ನಡೆಸಿದ ಹೋರಾಟ ಹಾಗೂ ಬೆಂಗಳೂರಿನಲ್ಲಿ ನಡೆದ ಸಮಾವೇಶ ಯಶಸ್ವಿಯಾಗಿದ್ದು ಸಿದ್ದರಾಮಯ್ಯಗೆ ಕಿರಿಕಿರಿ ಉಂಟು ಮಾಡಿದೆ. ನಾನು ಇಲ್ಲದೆ ಲಕ್ಷಾಂತರ ಕುರುಬರು ಸೇರುತ್ತಾರೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಹೀಗಾಗಿ ಕಿರಿಕಿರಿಯಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ಏಕೆ ಬೇಕೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ. ಹೋರಾಟಕ್ಕೂ ಮೊದಲು ಕಾಗಿನೆಲೆಯ ಜಗದ್ಗುರುಗಳು ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಆಹ್ವಾನಿಸಿದ್ದರು. ಆಗ ನಾನು ಹೋರಾಟಕ್ಕೆ ಬರುವುದಿಲ್ಲ ನೀವು ಮಾಡಿ ಎಂದು ತಿಳಿಸಿದ್ದರು. ಆಗ ಏಕೆ ಕುಲಶಾಸ್ತ್ರದ ಅಧ್ಯಯನದ ಬಳಿಕ ಹೋರಾಟ ಮಾಡೋಣವೆಂದು ಹೇಳಲಿಲ್ಲ? ಸ್ವಾಮೀಜಿಗಳ ಪಾದಯಾತ್ರೆ ಮತ್ತು ಸಮಾವೇಶಕ್ಕೆ ಆರ್‌ ಎಸ್‌ಎಸ್‌ ಹಣ ನೀಡಿದೆ ಎಂಬ ಆರೋಪಕ್ಕೆ ಗುರುಗಳೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ಭಗವಾನ್‌ ಮುಖಕ್ಕೆ ಮಸಿ:ಕ್ರಮಕ್ಕೆ ಆಗ್ರಹಿಸಿ ಮನವಿ

ತಮ್ಮನ್ನು ಬಿಟ್ಟು ನಡೆದ ಕುರುಬರ ಸಮಾವೇಶ ಯಶಸ್ವಿಯಾದ ಬಗ್ಗೆ ಸಂತೋಷ ಪಡುವ ಬದಲು ರಾಜಕೀಯವಾಗಿ ತಮ್ಮನ್ನು ಬಿಟ್ಟು ಕುರುಬರು ಸೇರಿದ್ದಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೂ ನಡವಳಿಕೆಗೂ ಏನೇನೂ ಸಂಬಂಧವಿಲ್ಲ. ಸಂವಿಧಾನಬದ್ಧವಾಗಿ ಎಲ್ಲಾ ಸಮಾಜಗಳಿಗೂ ಮೀಸಲಾತಿ ಇರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next