Advertisement

ಈಶ್ವರಪ್ಪ, ಸಂತೋಷ್ ಭೇಟಿಯಾಗಿದ್ದಾರೆ: ಗ್ರಾ.ಪಂ ಅಧ್ಯಕ್ಷರ ಸ್ಫೋಟಕ ಹೇಳಿಕೆ

03:06 PM Apr 13, 2022 | Team Udayavani |

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ ಕಾಮಗಾರಿ ಹಾಗೂ ಹಣ ಪಾವತಿಯ ವಿಷಯದಲ್ಲಿ ಸಚಿವ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದು ನಿಜ ಎಂದು ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ ಮನ್ನೋಳಕರ ಬುಧವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ನಾನು ಮತ್ತು ಸಂತೋಷ್ ಎರಡು ಬಾರಿ ಬೆಂಗಳೂರಿಗೆ ತೆರಳಿ ಈಶ್ವರಪ್ಪ ಅವರನ್ನು ಭೆಟ್ಟಿ ಮಾಡಿದ್ದೆವು. ಗ್ರಾಮದಲ್ಲಿ ಲಕ್ಷ್ಮಿ ಜಾತ್ರೆ ಇರುವುದರಿಂದ ರಸ್ತೆಗಳ ನಿರ್ಮಾಣ ಆಗಬೇಕಿದೆ ಎಂದು ಮನವಿ ಮಾಡಿದ್ದೆವು. ಆಗ ಈಶ್ವರಪ್ಪ ಅವರು ಆಯಿತು ಕಾಮಗಾರಿ ಮಾಡಿ. ಚೆನ್ನಾಗಿ ಕೆಲಸ ಮಾಡಿ ಮುಂದೆ ಎಲ್ಲ ಸರಿಮಾಡೋಣ ಎಂದು ಹೇಳಿದ್ದರು. ಸಚಿವರ ಮಾತಿನಂತೆ ಸಂತೋಷ್ 4 ಕೋಟಿ ರೂ ವೆಚ್ಚದಲ್ಲಿ 108 ಕಾಮಗಾರಿಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ; ಗುತ್ತಿಗೆದಾರರ ಸಂಘದ ಗಂಭೀರ ಆರೋಪ

ಮುಂದೆ ನಾನೂ ಸಹ ಕಾಮಗಾರಿಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೆ. ಈಗ ನನ್ನ ವಿರುದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರೋಪ ಮಾಡಿದ್ದು ಕೇಳಿ ನೋವಾಯಿತು. ಸಂತೋಷ್ ಆತ್ಮಹತ್ಯೆ ಬಹಳ ನೋವು ಉಂಟುಮಾಡಿದೆ. ಸರಕಾರ ಅವರ ಕುಟುಂಬದ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next