Advertisement

ಜನರ ಕಷ್ಟಕ್ಕಿಂತ ವರ್ಗಾವಣೆ ಮುಖ್ಯವೇ?

06:39 PM Sep 19, 2020 | Suhan S |

ಹಾಸನ: ಜಿಲ್ಲೆಯಲ್ಲಿ ರೈತರ ಸಂಕಷ್ಟ ಕೇಳುವವರಿಲ್ಲ.ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಆದರೆ, ಆಡಳಿತ ‌ ಪಕ್ಷ ರಾಜಕಾರಣಿಗಳು, ಅಧಿಕಾರಿಗಳ ವರ್ಗಾವಣೆ ದಂಧೆ ಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆತಂಕ ‌ ವ್ಯಕ್ತ ಪಡಿಸಿದರು.

Advertisement

ಜಿಲ್ಲೆಯಲ್ಲಿ ಇದುವರೆಗೂ 12 ಸಾವಿರ ಜನರಿಗೆ ಕೋವಿಡ್ ಸೋಂಕು ಹರಡಿದೆ. ಸೋಂಕಿಗೆ 250ಕ್ಕೂ ಹೆಚ್ಚು ಜನ‌ರು ಬಲಿಯಾಗಿದ್ದಾರೆ. ಅಧಿಕೃತವಾಗಿ 12 ಸಾವಿರ ಜನ ರಿಗೆ ಸೋಂಕು ದೃಢಪಟ್ಟಿದ್ದರೂ ಮುಂದಿನ ‌ ದಿನಗಳಲ್ಲಿ ಜಿಲ್ಲೆಯ 10 ಲಕ್ಷ ಜನರಿಗೆ ಸೋಂಕು ಹರಡುವ ಭೀತಿ ಇದೆ. ಚಿಕಿತ್ಸೆ ಸಿಗುವುದಿಲ್ಲವೆಂದು ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಚಾರಿ‌ ಪರೀಕ್ಷಾ ವ್ಯವಸ್ಥೆ ಮಾಡಿ, ಕೋವಿಡ್  ಪರೀಕ್ಷೆ ನಡೆಸಿ ಸೋಂಕು ಹರಡುವುದನ್ನು ನಿಯಂತ್ರಿಸಬೇಕು ಎಂದರು.

ಜಿಲ್ಲೆಯ ಜನರು ಸಂಕಷ್ಟ ‌ಲ್ಲಿದ್ದರೂ ವರ್ಗಾವಣೆ ದಂಧೆಯಲ್ಲಿ ಆಡಳಿತ ಪಕ್ಷದವರು ತಲ್ಲೀನರಾಗಿದ್ದಾರೆ. ಒಬ್ಬ ಪೊಲೀಸ್ ಇನ್‌ಸೆಕ್ಟರ್ ವರ್ಗವ‌ಣೆಗೆ 25 ಲಕ್ಷ ರೂ., ಲೋಕೋಪಯೋಗಿ ಕಾರ್ಯಪಾಲಕ ‌ ಎಂಜಿನಿಯರ್‌ ವರ್ಗಾವಣೆಗೆ1ಕೋಟಿ ರೂ. ಲಂಚ ಕೊಡಲಾಗಿದೆ ಎಂಬ ದೂರು ಗಳಿವೆ. ಸಿಎಂ ಯಡಿಯೂರಪ ³ ಅವರು ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸಿ ಗೌರವ ಉಳಿಸಿಕೊಳ್ಳಲಿ ಎಂದರು

Advertisement

Udayavani is now on Telegram. Click here to join our channel and stay updated with the latest news.

Next