Advertisement

ಇದೇನು ಗೂಂಡಾ ರಾಜ್ಯವೇ ? ನಾಳೆ ರಾಜ್ಯಾದ್ಯಂತ ಪ್ರತಿಭಟನೆ : ಬಿಎಸ್‌ವೈ 

03:25 PM Feb 13, 2019 | |

ಹಾಸನ: ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಮಾರಾಮಾರಿ ನಡೆದ ಬಳಿಕ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭೇಟಿ ನೀಡಿದರು. 

Advertisement

ಬುಧವಾರ ಸಂಜೆ ವಿದ್ಯಾನಗರದಲ್ಲಿರುವ ಮನೆಗೆ ಬಿಜೆಪಿ ನಾಯಕರೊಂದಿಎಗ ಭೇಟಿ ನೀಡಿ ಪ್ರೀತಂ ಅವರ ತಂದೆ, ತಾಯಿಯೊಂದಿಗೆ ಮಾತುಕತೆ ನಡೆಸಿದರು.  

ಸುದ್ದಿಗಾರರೊಂದಿಗೆ ಮಾತನಾಡಿ ಕಿಡಿ ಕಾರಿದ ಅವರ,ನಿಮ್ಮಂತೆ ನಮ್ಮದು 38 ಜನರ ಪಕ್ಷವಲ್ಲ.ಇವರಿಗಿಂದ ಹತ್ತು ಪಟ್ಟು ರಾಜಕೀಯ ಮಾಡಲು ನಮಗೆ ಗೊತ್ತಿದೆ.ಘಟನೆ ಹಿಂದೆ ಪೊಲೀಸ್‌ ಕುಮ್ಮಕ್ಕು ಇದೆ. ಇದು ಗೂಂಡಾ ರಾಜ್ಯವೇ? ಪೊಲೀಸ್‌ ರಾಜ್ಯವೇ ಎಂದು ಪ್ರಶ್ನಿಸಿದರು. 

ನಾಳೆ ಬೆಳಗ್ಗೆ  ರಾಜ್ಯಪಾಲರನ್ನು  ಭೇಟಿಯಾಗಿ ದೂರು ನೀಡುತ್ತೇವೆ. ಶಾಸಕರಿಗೆ ರಕ್ಷಣೆ ಕೋರಿ ಸ್ಪೀಕರ್‌ಗೂ ಮನವಿ ಮಾಡುತ್ತೇವೆ ಎಂದರು. 

ಬಿಜೆಪಿ ಕಾರ್ಯಕರ್ತರು ಯಾರೂ ವಿಚಲಿತರಾಗಬೇಕಿಲ್ಲ .ನಾವು ಯಾವೂದಕ್ಕೂ ಜಗ್ಗುವುದಿಲ್ಲ , ಬಗ್ಗುವುದಿಲ್ಲ  ಎಂದು ಕಿಡಿ ಕಾರಿದರು. 

Advertisement

ಘಟನೆ ಖಂಡಿಸಿ  ನಾಳೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲು ಬಿಎಸ್‌ವೈ ಕರೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next