Advertisement

ಆಧಾರ ರಹಿತ ದೂರಿಗೆ ಮಾನ್ಯತೆ ಕೊಡಲು ಸಾಧ್ಯವೇ?: ಸಚಿವ ಡಾ. ಕೆ. ಸುಧಾಕರ್‌

12:01 PM Apr 13, 2022 | Team Udayavani |

ಬೆಂಗಳೂರು: ಯಾರೋ ಒಬ್ಬ ಅನಾಮಧೇಯ ಪತ್ರ ಬರೆದಿದ್ದಾರೆ, ಆಧಾರ ರಹಿತವಾದ ದೂರಿಗೆ ಮಾನ್ಯತೆ ಕೊಡಲು ಸಾಧ್ಯವೇ?, ದೂರಿನ ಸಂಬಂಧ ದಾಖಲೆ ಎಲ್ಲಿದೆ? ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಧೇಯ ಪತ್ರ ಇಟ್ಟುಕೊಂಡು ಆರೋಪ ಮಾಡುವುದು, ಗೇಲಿ ಮಾಡುವುದು ಸರಿಯಲ್ಲ. ಪಕ್ಷಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಇದನ್ನೆಲ್ಲಾ ಮಾಡುತ್ತಿದೆ ಎಂದರು.

ಭ್ರಷ್ಟಾಚಾರದ ಜನಕ ಅಂದರೆ ಕಾಂಗ್ರೆಸ್. ಅತ್ಯಂತ ಭ್ರಷ್ಟಾಚಾರ ರಹಿತ ಸರ್ಕಾರವನ್ನು ಮೋದಿ ಕೊಡುತ್ತಿದ್ದಾರೆ. ಭ್ರಷ್ಟಾಚಾರ ಇದೆ, ಇಲ್ಲ ಅಂತಾ ಹೇಳುವುದಿಲ್ಲ. ಇದು ನಮ್ಮ ಸರ್ಕಾರ ಬಂದ ಮೇಲೆ ಆರಂಭವಾಗಿಲ್ಲ. ಭ್ರಷ್ಟಾಚಾರ ಮೊದಲಿನಿಂದಲೂ ಇದೆ ಎಂದು ಹೇಳಿದರು.

ಇದನ್ನೂ ಓದಿ:ಕೇಳಿದ್ದಕ್ಕೆಲ್ಲ ರಾಜೀನಾಮೆ ಕೊಡಲು ಆಗುವುದಿಲ್ಲ: ನಳೀನ್ ಕುಮಾರ್ ಕಟೀಲ್

ಎಲ್ಲಾ ಪಕ್ಷಗಳು ಒಂದಾಗಿ ಈ ಬಗ್ಗೆ ಚರ್ಚಿಸಬೇಕು. ಡಿವೈಎಸ್‌ಪಿ ಗಣಪತಿ ವಿಚಾರವೇ ಬೇರೆ, ಸಂತೋಷ್ ಆತ್ಮಹತ್ಯೆ ಪ್ರಕರಣ ಬೇರೆ. ಈಶ್ವರಪ್ಪ ಹಲವು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಇರುವವರು. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next