Advertisement

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

09:30 PM Oct 15, 2024 | Team Udayavani |

ಮೈಸೂರು: ಸ್ನೇಹಮಯಿ ಕೃಷ್ಣ ದೂರುದಾರರಾಗಿ ಲೋಕಾಯುಕ್ತರು ಕರೆದ ದಿನ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕು. ಅಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ ಒತ್ತಡ ಹೇರುವುದು ಸರಿಯಲ್ಲ. ಸಾಕ್ಷ್ಯನಾಶ ಮಾಡಲು ಇದೇನು ಕೊಲೆ ಪ್ರಕರಣವೇ? ನೋಂದಾಯಿತ ದಾಖಲೆಗಳನ್ನು ನಾಶ ಮಾಡಲು ಸಾಧ್ಯವೇ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಪ್ರಶ್ನಿಸಿದರು.

Advertisement

ದೂರುದಾರ ಯಾವಾಗ ಬೇಕಾದರೂ ಬಂದು ದಾಖಲೆ ಕೊಡಬಹುದೇ ಎನ್ನುವುದನ್ನು ಪೊಲೀಸರು ಹೇಳಬೇಕು. ಮೊದಲು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಬೇಕು. ಈ ಬಗ್ಗೆ ಬುಧವಾರ ಲೋಕಾಯುಕ್ತ ಎಸ್ಪಿ ಅವರಲ್ಲಿ ದೂರು ದಾಖಲಿಸಲಾಗುವುದು ಎಂದರು.

ಮುಡಾ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಪಾತ್ರಧಾರ. ಸೂತ್ರಧಾರರು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿದ್ದಾರೆ. ಕೃಷ್ಣ ಬಳಿ ಇರುವ ದಾಖಲೆಗಳಲ್ಲಿ ಶೇ.50 ನಕಲಿ, ನಕಲಿಯನ್ನು ಅಸಲಿ, ಅಸಲಿಯನ್ನು ನಕಲಿ ಮಾಡುವುದರಲ್ಲಿ ಇವರು ಪ್ರವೀಣರು ಎಂದು ಲೇವಡಿ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next