Advertisement

ಐಆರ್‌ಸಿಟಿಸಿ ಕೇಸು : ಲಾಲು, ರಾಬ್ರಿ, ತೇಜಸ್ವಿ, ಇತರರಿಗೆ ಬೇಲ್‌

06:26 AM Jan 28, 2019 | Team Udayavani |

ಹೊಸದಿಲ್ಲಿ : ಐಆರ್‌ಸಿಟಿಸಿ ಹಣ ದುರುಪಯೋಗ ಕೇಸಿಗೆ ಸಂಬಂಧಪಟ್ಟು ಇಲ್ಲಿನ ಪಟಿಯಾಲಾ ಹೌಸ್‌ ಕೋರ್ಟ್‌ ಇಂದು ಸೋಮವಾರ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌, ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್‌ ಮತ್ತು ಇತರರಿಗೆ ರೆಗ್ಯುಲರ್‌ ಬೇಲ್‌ ಮಂಜೂರು ಮಾಡಿದೆ. 

Advertisement

ತಲಾ 1 ಲಕ್ಷ ರೂ. ಭದ್ರತೆಯ ಆಧಾರದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್‌ ಫೆಬ್ರವರಿ 11ಕ್ಕೆ ನಿಗದಿಸಿದೆ. ನ್ಯಾಯಾಲಯ ಈ ಮೊದಲು ಆರೋಪಿಗಳಿಗೆ ಮಧ್ಯಾವಧಿ ಜಾಮೀನನ್ನು ನೀಡಿದ್ದು ಅದು ಇಂದು ಸೋಮವಾರ ಕೊನೆಗೊಂಡಿರುತ್ತದೆ. 

ಜಾಮೀನು ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ತೇಜಸ್ವಿ, ನಮಗೆ ನ್ಯಾಯಾಂಗದಲ್ಲಿ ನಂಬಿಕೆ, ವಿಶ್ವಾಸ ಇದೆ; ಅಂತೆಯೇ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next