Advertisement

ಇರಾ ಕಬಡ್ಡಿ:  ಆಳ್ವಾಸ್‌ ತಂಡಕ್ಕೆ ಪ್ರಶಸ್ತಿ

03:45 AM Feb 16, 2017 | Harsha Rao |

ಮಂಗಳೂರು: ಬಂಟ್ವಾಳದ ಇರಾ ಭಾರತ್‌ ಫ್ರೆಂಡ್ಸ್‌ ಕ್ಲಬ್‌ ಆಶ್ರಯದಲ್ಲಿ ಬೆಳ್ಳಿಪ್ಪಾಡಿಗುತ್ತು ದಿ| ಕೃಷ್ಣಪ್ರಸಾದ್‌ ರೈ ಬಾವಬೀಡು ಇವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಪ್ರೊ ಕಬಡ್ಡಿ ಮಾದರಿಯ ರಾಜ್ಯ ಮಟ್ಟದ “ಇರಾ ಕಬಡ್ಡಿ-2017’ರ ಪ್ರಶಸ್ತಿಯನ್ನು ಆಳ್ವಾಸ್‌ ಮೂಡಬಿದಿರೆ ತಂಡವು ತನ್ನದಾಗಿಸಿತು. 

Advertisement

ಫೈನಲ್‌ನಲ್ಲಿ ಆಳ್ವಾಸ್‌ ತಂಡವು 29-25 ಅಂಕ ಗಳೊಂದಿಗೆ ವರುಣ್‌ ಟ್ರಾವೆಲ್ಸ್‌ ಬೆಳ್ತಂಗಡಿ ತಂಡವನ್ನು ಪರಾಭವಗೊಳಿಸಿ 55,000 ರೂ. ನಗದು ಹಾಗೂ ಇರಾ ಟ್ರೋಫಿಯನ್ನು ಪಡೆದುಕೊಂಡಿತು. ಲಯನ್‌ ಭಟ್ಕಳ ಮೂರನೇ ಹಾಗೂ ಅರಬ್‌ ರೈಡರ್ ತುಮಿನಾಡ್‌ ನಾಲ್ಕನೇ ಸ್ಥಾನ ಪಡೆಯಿತು. ಆಳ್ವಾಸ್‌ ತಂಡದ ವಿಶ್ವರಾಜ್‌ ಸವ್ಯಸಾಚಿ ಪ್ರಶಸ್ತಿ, ಆಳ್ವಾಸ್‌ನ ಭರತ್‌ ಉತ್ತಮ ದಾಳಿಗಾರ ಹಾಗೂ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ವರುಣ್‌ ಟ್ರಾವೆಲ್ಸ್‌ನ ಚೇತನ್‌ ಸುವರ್ಣ ಪಡೆದುಕೊಂಡರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರಶಸ್ತಿ ವಿತರಿಸಿದರು. ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್‌ ಆರ್‌ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಹಲವು ಗಣ್ಯರು ಉಪಸ್ಥಿತರಿದ್ದರು. 

ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರಾದ ಕೃಷ್ಣಪ್ಪ ಬಂಗೇರ ಪಾಣೆಮಂಗಳೂರು ಹಾಗೂ ಕಬಡ್ಡಿ ತರಬೇತುದಾರ ಕರುಣಾಕರ ಶೆಟ್ಟಿ ಮಡಂತ್ಯಾರ್‌ ಅವರನ್ನು ಸಮ್ಮಾನಿಸಲಾಯಿತು. ಪ್ರೊ ಕಬಡ್ಡಿ ಆಟಗಾರರಾದ ಜಗದೀಶ್‌ ಕುಂಬ್ಳೆ, ಸುಕೇಶ್‌ ಹೆಗ್ಡೆ ಹಾಗೂ ಪ್ರಶಾಂತ್‌ ರೈ ಪುತ್ತೂರು, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next