Advertisement

ಕೆಐಒಸಿಎಲ್‌ ವಿಸ್ತರಣಾಯೋಜನೆಗಳಿಗೆ ಬಂಡವಾಳ

12:12 PM Jul 22, 2018 | |

ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿಯು (ಕೆಐಒಸಿಎಲ್‌) ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ಕೈಗೊಳ್ಳಲಿರುವ ವಿಸ್ತರಣಾ ಯೋಜನೆಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ.

Advertisement

ಈ ಸಂಬಂಧ ಇತೀ¤ಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರನ್ನು ಭೇಟಿ ಮಾಡಿದ ಕೆಐಒಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಸುಬ್ಟಾರಾವ್‌ ಅವರು, ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಹಾಗೂ ಹೊಸ ವಿಸ್ತರಣಾ ಯೋಜನೆಗಳಿಗೆ ಸೂಕ್ತ ನೆರವು ನೀಡುವಂತೆ ಮನವಿ ಮಾಡಿದರು. ಪ್ರಸ್ತುತ ಅದಿರು ಉತ್ಪಾದನೆಯಲ್ಲಿ ಕೆಐಒಸಿಎಲ್‌ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಗ್ರೀನ್ನ್‌ಫೀಲ್ಡ್‌ ಪ್ರಾಜೆಕ್ಟ್ಗಳನ್ನು ಪ್ರಾರಂಭಿಸಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿರುವುದಾಗಿ ಸುಬ್ಟಾರಾವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next