Advertisement

ಮತ್ತೆ ಕಾಡಲಿದೆಯೇ ಸಿಖ್‌ ವಿರೋಧಿ ದಂಗೆ ತನಿಖೆ?

08:40 AM Aug 17, 2017 | Harsha Rao |

ಹೊಸದಿಲ್ಲಿ: 1984ರ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದ 241 ಪ್ರಕರಣಗಳನ್ನು ಮುಚ್ಚಿ ಹಾಕಿರುವ ಎಸ್‌ಐಟಿ ನಿರ್ಧಾರದ ಕುರಿತು ಪರಿಶೀಲನೆ ನಡೆಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಮೇಲ್ವಿ ಚಾರಣಾ ಸಮಿತಿಯೊಂದನ್ನು ರಚಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

Advertisement

“ಸಿಖ್‌ ವಿರೋಧಿ ದಾಳಿಗೆ ಸಂಬಂಧಿಸಿದ 241 ಪ್ರಕರಣಗಳನ್ನು ಮುಕ್ತಾಯಗೊಳಿಸಿದ  ಎಸ್‌ಐಟಿ ನಿರ್ಧಾರ ನ್ಯಾಯ ಸಮ್ಮತವಾಗಿದೆಯೇ ಎಂದು ಈ ಸಮಿತಿ ಪರಿಶೀಲನೆ ನಡೆಸಲಿದೆ. 3 ತಿಂಗಳುಗಳ ಒಳಗೆ ವರದಿ ನೀಡಬೇಕು ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಸೂಚಿಸಿತು.

ಈ ವೇಳೆ “1984ರ ಸಿಕ್‌ ವಿರೋಧಿ ದಾಳಿಗೆ ಸಂಬಂಧಿಸಿದ ಇನ್ನೂ 42 ಪ್ರಕರಣಗಳಿಗೆ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಐಟಿ) ತೆರೆ ಎಳೆದಿದ್ದು, ಈ ಪ್ರಕರಣಗಳ ಕುರಿತೂ ಮೇಲ್ವಿಚಾರಣಾ ಸಮಿತಿ ಪರಿಶೀಲನೆ ನಡೆಸಬೇಕು,’ ಎಂದು ನ್ಯಾಯವಾದಿ ಎಚ್‌.ಎಸ್‌. ಫೋಲಕ್‌ ನ್ಯಾಯಪೀಠವನ್ನು ಕೋರಿದಾಗ, ನ್ಯಾಯ ಪೀಠ ಸಮ್ಮತಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next