Advertisement

ಧ್ವಜ ಹರಿದಿದ್ದಕ್ಕೆ ತನಿಖೆ ನಡೆಸಿ

06:00 AM Apr 21, 2018 | |

ಲಂಡನ್‌: ಪ್ರಧಾನಿ ಮೋದಿ ಇಂಗ್ಲೆಂಡ್‌ ಭೇಟಿ ವೇಳೆ ಸಂಸತ್‌ ಭವನದ ಎದುರು ಭಾರತದ ಧ್ವಜವನ್ನು ಪ್ರತಿಭಟನಾಕಾರರು ಹರಿದಿದ್ದಕ್ಕೆ ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಇಂಗ್ಲೆಂಡ್‌ಗೆ ಭಾರತ ಒತ್ತಾಯಿಸಿದೆ.  ಇಂಗ್ಲೆಂಡ್‌ ಸರಕಾರದ ಜತೆ ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.

Advertisement

ನಮ್ಮ ದೇಶದ ಧ್ವಜ ಹರಿದಿದ್ದಕ್ಕೆ ತೀವ್ರ ಬೇಸರಗೊಂಡಿದ್ದೇವೆ. ಘಟನೆಯಲ್ಲಿ ಭಾಗವಹಿಸಿದವರು ಮತ್ತು ಇದರ ಹಿಂದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ ಎಂದು ಇಲಾಖೆ ಹೇಳಿದೆ.

ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ಭಾಗವಹಿಸಿದರು. 53 ದೇಶಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next