Advertisement

ನಾಳೆ ಪ್ರಧಾನಿ ಮೋದಿ ತ್ರಿಪುರ ಭೇಟಿ: ವ್ಯಾಪಕ ಭದ್ರತೆ

04:54 PM Feb 07, 2018 | Team Udayavani |

ಅಗರ್ತಲಾ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಗುರುವಾರ  ಕೈಗೊಳ್ಳುವ ತ್ರಿಪುರ ಭೇಟಿಯ ಪ್ರಯುಕ್ತ ಭದ್ರತೆಯ ಕ್ರಮವಾಗಿ  ಸಿಪಾಹಿಜಲ ಮತ್ತು ಉನಾಕೋಟಿ ಜಿಲ್ಲೆಗಳಿಗೆ ತಾಗಿಕೊಂಡಿರುವ ಭಾರತ – ಬಾಂಗ್ಲಾ ಗಡಿಯನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಬಾಂಗ್ಲಾ ಗಡಿಗೆ ಸಮೀಪದ ಪ್ರದೇಶದಲ್ಲಿ ಪ್ರಧಾನಿಯವರು ಎರಡು ಸಾರ್ವಜನಿಕ ಭಾಷಣ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಪ್ರೋಗಾಂ ಮ್ಯಾನೇಜರ್‌ ಮತ್ತು ಡೆಪ್ಯುಟಿ ಸ್ಪೀಕರ್‌ ಬಿಸ್ವರೂಪ್‌ ಭಟ್ಟಾಚಾರ್ಯ ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಅಗರ್ತಲಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಅವರು ಐಎಎಫ್ ಹೆಲಿಕಾಪ್ಟರ್‌ ಮೂಲಕ ಸಿಪಾಹಿಜಲ ಜಿಲ್ಲೆಯ ಸೋನಾಮುರಾಗೆ ತೆರಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next