Advertisement

ನಾಳೆ ಚಿತ್ರದುರ್ಗದಲ್ಲಿ ಅನ್ನದಾತರೊಂದಿಗೆ ಬಿ.ಸಿ.ಪಾಟೀಲರ ಅಂತರಾಳದ ಮಾತು

05:49 PM Feb 10, 2022 | Team Udayavani |

ಬೆಂಗಳೂರು:ತಮ್ಮ ಜನ್ಮದಿನವನ್ನು ರೈತರಿಗಾಗಿ ಮೀಸಲಿಟ್ಟಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ.

Advertisement

ಕೃಷಿ ಸಚಿವರಾಗಿ ಫೆ.11ಕ್ಕೆ ಬಿ.ಸಿ.ಪಾಟೀಲರು ಎರಡು ವರ್ಷವನ್ನು ಪೂರೈಸುತ್ತಿದ್ದಾರೆ.ಹೀಗಾಗಿ ಅನ್ನದಾತರ ಸೇವೆ ಮಾಡಲು ಅವಕಾಶವನ್ನು ನೀಡಿರುವ ಈ ಫೆ.11ರ ನಾಳೆಯ ದಿನವನ್ನು ಉಸ್ತುವಾರಿ ಜಿಲ್ಲೆ ಚಿತ್ರದುರ್ಗದಲ್ಲಿ ಅನ್ನದಾತರೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಬೇಡರ ಶಿವನಕೆರೆ ರೈತ ಗಿರೀಶ್ ಅವರ ಜಮೀನಿನಲ್ಲಿ ಕಳೆಯಲಿದ್ದು,ಅನ್ನದಾತರೊಂದಿಗೆ ಅಂತರಾಳದ‌ ಮಾತುಗಳನ್ನಾಡಲಿದ್ದಾರೆ.ಬಳಿಕ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next