Advertisement

ಶಾಂತಾತ ಸಮಿತಿ ಕಾರ್ಯಾಧ್ಯಕ್ಷರಾಗಿ ವಿಶ್ವನಾಥ್‌ ಶೆಟ್ಟಿ ಆಯ್ಕೆ

11:14 AM Oct 25, 2017 | Team Udayavani |

ಪುಣೆ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಾನವಾಧಿಕಾರ ಅಸೋಸಿಯೇಟ್ಸ್‌ನ  ಪುಣೆ  ಜಿಲ್ಲಾ  ಶಾಂತಾತ  ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿಶ್ವನಾಥ್‌ ಶೆಟ್ಟಿ  ಹಿರಿಯಡ್ಕ ಅವರನ್ನು ನೇಮಿಸಲಾಗಿದೆ.

Advertisement

ಪುಣೆಯ ಕಾತ್ರಜ್‌ ಅಯ್ಯಪ್ಪ ಸ್ವಾಮೀ ದೇವಸ್ಥಾನದಲ್ಲಿ ನಡೆದ ಅಸೋಸಿಯೇಟ್ಸ್‌ನ
ಕಾರ್ಯಕ್ರಮದಲ್ಲಿ ಪುಣೆ ಜಿಲ್ಲಾ ಅಧ್ಯಕ್ಷರಾದ ರಘುರಾಮ್‌ ರೈ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿ ನಿವೃತ್ತ ಪೊಲೀಸ್‌ ಅಧಿಕಾರಿ ಅನಿಲ… ನಿಂಬಾಳ್ಕರ್‌  ಅವರು ಅಸೋಸಿಯೇಟ್ಸ್‌ನ ಪ್ರಮಾಣ ಪತ್ರವನ್ನು ವಿಶ್ವನಾಥ್‌ ಶೆಟ್ಟಿ ಅವರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಭಾಷ್‌ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು  ವಿಶ್ವನಾಥ ಶೆಟ್ಟಿ ಅವರನ್ನು  ಅಭಿನಂದಿಸಿದರು. ಸಾಮಾಜಿಕ ನ್ಯಾಯಬದ್ಧತೆಯೊಂದಿಗೆ ಕಾರ್ಯಗೈಯುವ  ಸಂಕಲ್ಪದೊಂದಿಗೆ ವಿಶ್ವನಾಥ್‌ ಶೆಟ್ಟಿ ಅವರು ಪ್ರಮಾಣ ಪತ್ರವನ್ನು ಸ್ವೀಕರಿಸಿದರು .

ಪುಣೆಯಲ್ಲಿ  ಉದ್ಯೋಗಿಯಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವಿಶ್ವನಾಥ್‌ ಶೆಟ್ಟಿ ಅವರು ಮೂಲತಃ ಉಡುಪಿ ಹಿರಿಯಡ್ಕದ ಬಸ್ತಿ ಆನಂದ ಶೆಟ್ಟಿ  ಹಾಗೂ ವಾರಿಜಾ ಎ. ಶೆಟ್ಟಿ ದಂಪತಿಯ ಪುತ್ರ. ಇವರು ಪುಣೆ ತುಳು ಕೂಟ ಕಾರ್ಯಕಾರಿ ಸಮಿತಿ ಪದಾಧಿಕಾರಿಯಾಗಿ ಅಲ್ಲದೆ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇವರು ಪತ್ನಿ ದೀಪಾ, ಪುತ್ರ ಪ್ರಜ್ವಲ್‌  ಮತ್ತು ಪುತ್ರಿ ಪ್ರಿಶಾರೊಂದಿಗೆ ಪುಣೆಯಲ್ಲಿ ನೆಲೆಸಿದ್ದಾರೆ. 

 ಚಿತ್ರ-ವರದಿ: ವರದಿ ಹರೀಶ್‌ ಮೂಡಬಿದ್ರೆ

Advertisement

Udayavani is now on Telegram. Click here to join our channel and stay updated with the latest news.

Next