Advertisement
ಈಗಾಗಲೇ ಪ್ರಕರಣದ ತೀರ್ಪು ಪ್ರಕಟಿಸಲಾಗಿದ್ದು, ಏನಾದರೂ ತಾಂತ್ರಿಕ ಅಂಶಗಳಿದ್ದರೆ ಪರಿಗಣಿಸಬಹುದು. ಆದರೆ, ಅದೇ ತೀರ್ಪು ಮಾರ್ಪಾಡು ಮಾಡುವುದು ಅಥವಾ ಯಾವುದೇ ರೀತಿಯ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
Related Articles
Advertisement
ಹಾಗಾಗಿ, ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶಬೇಕು ಎಂದು ವಕೀಲರು ಮನವಿ ಮಾಡಿದರು. ತೀರ್ಪಿನ ಪ್ರತಿ ವೆಬ್ಸೈಟ್ನಲ್ಲಿ ಪ್ರಕಟಿಲಾಗಿದೆ. ಇಂದೇ (ಶುಕ್ರವಾರ) ಮೇಲ್ಮನವಿ ಸಲ್ಲಿಸಬಹುದಲ್ವಾ? ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಬೇಕು ಎಂದು ಕೇಳಿದ್ದಕ್ಕೆ ಶನಿವಾರ ಹಾಜರಾಗುತ್ತೀರಾ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.
ಅದಕ್ಕೆ, ಬಂಧಿಸುವುದಿಲ್ಲ ಎಂಬ ಮಧ್ಯಂತರ ರಕ್ಷಣೆ ಸಿಗದಿದ್ದರೆ ಹಾಜರಾಗುವುದು ಹೇಗೆ? ಅದಕ್ಕಾಗಿ ಮಧ್ಯಂತರ ರಕ್ಷಣೆ ನೀಡಬೇಕು ಎಂದು ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲ ಎಂ.ಬಿ. ನರಗುಂದ, ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಸೇರಿ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡಿದ್ದು,
ಅರ್ಜಿಯ ವಿಚಾರಣೆಗೆ ಮುಗಿಯುವವರೆಗೆ. ಈಗ ವಿಚಾರಣೆ ಮುಗಿದು ನ್ಯಾಯಪೀಠ ಅಂತಿಮ ತೀರ್ಪು ಕೊಟ್ಟಿದೆ. ಮಧ್ಯಂತರ ರಕ್ಷಣೆ ಈಗ ಅನ್ವಯವಾಗುವುದಿಲ್ಲ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಮತ್ತು ಯಾವುದೇ ಮಧ್ಯಂತರ ರಕ್ಷಣೆ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.