Advertisement

20 ಕೈದಿಗಳಿಗೆ ಮಧ್ಯಂತರ ಜಾಮೀನು

07:00 PM May 28, 2021 | Team Udayavani |

ಮಂಡ್ಯ: ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಏಳು ವರ್ಷ ದೊಳಗಿನಕಾರಾಗೃಹ ಶಿಕ್ಷೆಯಾಗುವ ನ್ಯಾಯಾಂಗ ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಮಾಡುವಂತೆ ಸುಪ್ರೀಂ ಕೋರ್ಟ್‌ ಹಾಗೂಹೈಕೋರ್ಟ್‌ನ ನಿರ್ದೇಶನ ಮೇರೆಗೆ ಜಿಲ್ಲಾಕಾರಾಗೃಹದಿಂದ 20 ಮಂದಿ ಕೈದಿಗಳನ್ನುಬಿಡುಗಡೆ ಮಾಡಲಾಗಿದೆ.

Advertisement

20 ಮಧ್ಯಂತರ ಜಾಮೀನು: ಪ್ರಸ್ತುತ ಮಂಡ್ಯಜಿಲ್ಲಾ ಕಾರಾಗೃಹದಲ್ಲಿದ್ದ 20 ಮಂದಿನ್ಯಾಯಾಂಗ ಬಂಧಿತ ಜೈಲು ಹಕ್ಕಿಗಳಿಗೆ 45ದಿನಗಳ ಮಧ್ಯಂತರ ಜಾಮೀನು ದೊರಕಿದೆ.

ಇನ್ನೂ ಕೆಲವರು ನ್ಯಾಯಾಂಗ ನಿಯಮಾವಳಿಪೂರೈಸಿ ಬಿಡುಗಡೆಯಾಗುವಹೊಸ್ತಿಲಲ್ಲಿದ್ದಾರೆ.7 ವರ್ಷದೊಳಗಿನ ನ್ಯಾಯಾಂಗ ಬಂಧನಆರೋಪಿಗಳು: ಕೊರೊನಾ ಸೋಂಕುನಿಮಿತ್ತ  ಕೊಲೆ, ದರೋಡೆ, ಸಣ್ಣಪುಟ್ಟಪ್ರಕರಣಗಳು ಸೇರಿದಂತೆ 7 ವರ್ಷ ಮೇಲ್ಮಟ್ಟಶಿಕ್ಷೆಯಾಗುವ ಬಂಧಿತರನ್ನು ಹೊರತುಪಡಿಸಿ7 ವರ್ಷದೊಳಗಿನ ಕಾರಾಗೃಹ ಶಿಕ್ಷೆಯಾಗುವ ನ್ಯಾಯಾಂಗ ಬಂಧಿತರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರಿಂಕೋರ್ಟ್‌ಹಾಗೂ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಆಮೇರೆಗೆ ಬಂಧಿತರು ಜಿಲ್ಲಾ ಕಾನೂನುಸೇವೆಗಳ ಪ್ರಾ ಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು.ಪ್ರಾ ಧಿಕಾರದ ಸಮಿತಿ ಅರ್ಜಿ ಪರಿಶೀಲಿಸಿಜಾಮೀನು ಮಂಜೂರು ಮಾಡುತ್ತದೆ.

263 ಜೈಲು ಹಕ್ಕಿಗಳು: ಸದ್ಯ ಮಂಡ್ಯಕಾರಾಗೃಹದಲ್ಲಿ 5 ಮಂದಿ ಅಪರಾ ಧಿಗಳು,248 ಮಂದಿ ಪುರುಷರು 15 ಮಹಿಳೆಯರುಸೇರಿದಂತೆ 263 ಬಂಧಿತರಿದ್ದಾರೆ. ಇದರಲ್ಲಿಈಗಾಗಲೇ 20 ಮಂದಿ ಮಧ್ಯಂತರಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

Advertisement

ಸೋಂಕು ಮುಕ್ತ ಜೈಲು: ಕೊರೊನಾ ಮೊದಲಅಲೆಯಲ್ಲಿ ಕಾರಾಗೃಹದಲ್ಲಿದ್ದ 20 ಮಂದಿಗೆಸೋಂಕು ಹರಡಿತ್ತು. ಎರಡನೇ ಅಲೆಯಲ್ಲಿಇಬ್ಬರಿಗೆ ಆವರಿಸಿತ್ತು. ಜೈಲು ಅ ಧಿಕಾರಿಗಳುಕೈಗೊಂಡ ಮುಂಜಾಗ್ರತೆ ಕ್ರಮದಿಂದಸೋಂಕು ಮುಕ್ತ ಜೈಲಾಗಿ ಮಾರ್ಪಟ್ಟಿದೆ.ಮುಂಜಾಗ್ರತೆ ಕ್ರಮ: ಇನ್ನೂ ಮಂಡ್ಯಕಾರಾಗೃಹದಲ್ಲಿನ ಬಂಧಿತರಿಗೆ ಸೋಂಕುಹರಡದಂತೆ ಅಗತ್ಯ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ. ಬಂಧಿತರ ಸಂದರ್ಶನಕ್ಕೆನಿರ್ಬಂಧ ಹೇರಲಾಗಿದೆ.

ಕಾರಾಗೃಹ ಆವರಣವನ್ನು ನಿತ್ಯ ರಸಾಯನಿಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಲಾಗುತ್ತಿದೆ. ಕುಡಿಯಲುಬಿಸಿ ನೀರು, ಬಿಸಿಯೂಟ ನೀಡಲಾಗುತ್ತಿದೆ.ಜ್ವರ ಬಂದರೆ ಕಾರಾಗೃಹದ ಐಸೋಲೇಷನ್‌ಸೆಲ್‌ನಲ್ಲಿ ಚಿಕಿತ್ಸೆ ನೀಡಲಾಗುವುದು.ವಾರಕ್ಕೊಮ್ಮೆ ಮಿಮ್ಸ್‌ ವೈದ್ಯರು ನಿಯಮಿತವಾಗಿ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದು,ಮಾನಸಿಕ ತಜ್ಞರಿಂದಲ್ಲೂ ಆಪ್ತ ಸಮಾಲೋಚನೆನಡೆಯುತ್ತಿದೆ. ಯಾರಿಗಾದರೂ ಸೋಂಕುದೃಢಪಟ್ಟರೆ ಕೂಡಲೇ ಚಿಕಿತ್ಸೆ ನೀಡಲು ಎಲ್ಲರೀತಿಯ ಕ್ರಮ ವಹಿಸಲಾಗುತ್ತಿದೆ.

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next