Advertisement

ಅಂತರ್‌ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

11:43 AM Jan 14, 2018 | Team Udayavani |

ಮಹಾನಗರ: ಕ್ರೀಡೆಯು ಯುವಜನಾಂಗವನ್ನು ಒಂದುಗೂಡಿಸಿ ಸಮಾಜದಲ್ಲಿ ಶಾಂತಿ-ಸಾಮರಸ್ಯವನ್ನು
ಮೂಡಿಸುವ ಶಕ್ತಿಯನ್ನು ಹೊಂದಿದ್ದು, ಅದನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್‌ ರಾವ್‌ ಹೇಳಿದರು.

Advertisement

ನಗರದ ನೆಹರೂ ಮೈದಾನದಲ್ಲಿ ನ್ಯೂ ಮಾರ್ಕ್‌ ನ್ಪೋರ್ಟ್ಸ್ ಹಾಗೂ ಕಲ್ಚರಲ್‌ ಕ್ಲಬ್‌ ವತಿಯಿಂದ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಸಹಯೋಗದಲ್ಲಿ 5 ಜಿಲ್ಲೆಗಳ ಅಂತರ್‌ ಜಿಲ್ಲಾ ಮಟ್ಟದ ಪುರುಷರ ಪ್ರೊ. ಮಾದರಿಯ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು. ದಾರಿ ತಪ್ಪುತ್ತಿರುವ ಯುವಜನಾಂಗವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಹೆಚ್ಚು ಕ್ರೀಡಾಕೂಟಗಳು ನಡೆಯಬೇಕು. ಜತೆಗೆ ವಿದ್ಯಾಸಂಸ್ಥೆಗಳು ಕೂಡ ಕ್ರೀಡಾ ಕೂಟಗಳನ್ನು ಆಯೋಜಿಸಿ ಕ್ರೀಡೆಯ ಕುರಿತು ಆಸಕ್ತಿ ಮೂಡಿಸಬೇಕು ಎಂದರು.

ಕ್ರೀಡೆಗೆ ಹೆಚ್ಚಿನ ಸಹಕಾರ
ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಇಂದಿನ ದಿನಗಳಲ್ಲಿ ಸರಕಾರವು ಕ್ರೀಡೆಗೆ ಹೆಚ್ಚಿನ ಸಹಕಾರ ನೀಡುತ್ತಿದ್ದು, ಮುಂದೆ ಇನ್ನಷ್ಟು ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದರು.

ತಾರತಮ್ಯ
ಜಿಲ್ಲಾ ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರವು ಕ್ರೀಡೆಗೆ ನೀಡುತ್ತಿರುವ ಮಾನ್ಯತೆ ಕಡಿಮೆಯಾಗುತ್ತಿದ್ದು, ಕ್ರೀಡಾಳುಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲೂ ತಾರತಮ್ಯ ಮಾಡುತ್ತಿದೆ. ಹೀಗಾಗಿ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರ, ಹೆಚ್ಚಿನ ಸಹಕಾರ ನೀಡಿ ದರೆ ಮಾತ್ರ ಕ್ರೀಡೆ ಬೆಳೆಯಲು ಸಾಧ್ಯ ಎಂದರು.

ಎ.ಸಿ. ವಿನಯರಾಜ್‌, ಅಬ್ದುಲ್‌ ಲತೀಫ್‌, ತುರವೇ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜೆಪ್ಪು, ಕಬಡ್ಡಿ ಪಟು ಉದಯ ಚೌಟ,
ಪ್ರೊ. ಕಬಡ್ಡಿ ಆಟಗಾರ ಜಗದೀಶ್‌ ಕುಂಬ್ಳೆ, ಬಾಲಕೃಷ್ಣ ಕೊಲ್ಲಾಜೆ, ಅನಿಲ್‌ಕುಮಾರ್‌, ಯಶವಂತ ಮಾಡ, ನಾಮದೇವ ರಾವ್‌, ಕ್ಲಬ್‌ನ ಅಧ್ಯಕ್ಷ ನೋವೆಲ್‌ ಡಿ. ಅಲ್ಮೇಡಾ , ಚಲ ನ ಚಿತ್ರ ನಿರ್ದೇಶಕ ವಿಜಯ ಕುಮಾರ ಕೊಡಿಯಾಲ್‌ ಬೈಲ್‌, ಹಾಗೂ ಕೆಎಸ್‌ ಆರ್‌ ಟಿಸಿ ನಿರ್ದೇಶಕ ಟಿ.ಕೆ. ಸೂಧೀರ್‌ ಮೊದಲಾದವರು ಉಪಸ್ಥಿತರಿದ್ದರು. ರಝಾಕ್‌ ಕುಕ್ಕಾಜೆ ಸ್ವಾಗತಿಸಿದರು. ಗಝಾಲಿ ನಿರ್ವಹಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next