Advertisement

ಮೂರು ದಿನದಲ್ಲಿ ಎರಡನೇ ಮರ್ಯಾದಾ ಹತ್ಯೆ: 12 ಬಾರಿ ಚೂರಿಯಿಂದ ಇರಿದು 23 ವರ್ಷದ ಯುವಕನ ಹತ್ಯೆ

10:32 AM Jan 03, 2021 | Team Udayavani |

ಚಂಡೀಗಢ: ಹರ್ಯಾಣದಲ್ಲಿ ಕಳೆದ ಮೂರು ದಿನದ ಅಂತರದಲ್ಲಿ ಎರಡನೇ ಮರ್ಯಾದಾ ಹತ್ಯೆ ಪ್ರಕರಣ ನಡೆದಿದೆ. ತಂಗಿ ಪ್ರೀತಿಸಿ ಮದುವೆಯಾದ ಅನ್ಯ ಜಾತಿಯ ಯುವಕನನ್ನು ಹುಡುಗಿಯ ಅಣ್ಣನೇ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

Advertisement

23 ವರ್ಷದ ನೀರಜ್ ಕೊಲೆಯಾದ ಯುವಕ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಪಾಣಿಪತ್ ನ ಜನನಿಬಿಢ ಮಾರುಕಟ್ಟೆಯಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿಯು ನೀರಜ್ ಗೆ 12 ಬಾರಿ ಚೂರಿಯಲ್ಲಿ ಇರಿದಿದ್ದಾನೆ.

ಒಂದೂವರೆ ತಿಂಗಳ ಹಿಂದೆ ನೀರಜ್ ವಿವಾಹವಾಗಿತ್ತು. ಅಂತರ್ ಜಾತಿ ವಿವಾಹವಾದ ಕಾರಣ ಹುಡುಗಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಊರಿನಲ್ಲಿ ಹಲವಾರು ಬಾರಿ ಪಂಚಾಯತಿ ನಡೆದಿತ್ತು.

ಘಟನೆಯ ದಿನ ಆರೋಪಿಯು ನೀರಜ್ ಗೆ ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದ್ದನು. ಭೇಟಿಯಾಗಲು ಬಂದಾಗ ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ಈ ಬಗ್ಗೆ ನೀರಜ್ ಸಹೋದರ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕೆಲವು ದಿನಗಳಿಂದ ಹುಡುಗಿಯ ಮನೆಯವರು ನನ್ನ ಸಹೋದರನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ನಾವು ಪೊಲೀಸರ ರಕ್ಷಣೆ ಕೇಳಿದ್ದೆವು. ಆದರೆ ಪೊಲೀಸರು ನಿರಾಕರಿಸಿದ್ದರು. ಇದೀಗ ಕುಟುಂಬದಲ್ಲಿ ಮತ್ತಷ್ಟು ಕೊಲೆಗಳಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಜಗದೀಶ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕೆಲವೇ ದಿನ ಹಿಂದೆ ರೋಹ್ಟಕ್ ನಲ್ಲಿ ಪ್ರೀತಿಸಿ ಕೋರ್ಟ್ ನಲ್ಲಿ ಮದುವೆಯಾಗಿದ್ದಾರೆಂದು ಎಂದು ಸಿಟ್ಟಿನಿಂದ ಯುವತಿಯ ಮಾವ ಗುಂಡಿಕ್ಕಿ ಆಕೆಯನ್ನು ಹತ್ಯೆ ಮಾಡಿದ್ದು, ಆಕೆಯ ಪ್ರಿಯಕರನಿಗೆ ಗಂಭೀರ ಗಾಯಗಳಾದ ಪ್ರಕರಣ ನಡೆದಿತ್ತು. ಇಲ್ಲಿ ಯುವಕ-ಯುವತಿ ಜಾಟ್ ಸಮುದಾಯವಾಗಿದ್ದರೂ ಕೂಡ ಬೇರೆ ಬೇರೆ ಗ್ರಾಮದವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next