Advertisement

Ayodhya: 1 ಲಕ್ಷ 25 ಸಾವಿರ ಭಗವಾಧ್ವಜ ಹಾರಿಸಲು ಉದ್ದೇಶ: ಪ್ರಹ್ಲಾದ ಜೋಶಿ

09:55 PM Jan 07, 2024 | Team Udayavani |

ಧಾರವಾಡ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1ಲಕ್ಷ, ಧಾರವಾಡ ನಗರದಲ್ಲಿ 25 ಸಾವಿರ ಭಗವಾಧ್ವಜಗಳನ್ನು ಮನೆಗಳ ಮೇಲೆ ಹಾರಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಈ ಪ್ರಯುಕ್ತ ಭಗವಾಧ್ವಜಗಳನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಜ.15ರಿಂದ ಜ.22ರವರೆಗೂ ಒಟ್ಟು 1ಲಕ್ಷ 25 ಸಾವಿರ ಭಗವಾಧ್ವಜಗಳು ಹಾರಾಡಲಿದ್ದು, ಇದರಲ್ಲಿ ಪ್ರಭು ಶ್ರೀರಾಮನ ಚಿತ್ರ ಅಳವಡಿಸಲಾಗಿದೆ ಎಂದರು.

ದಕ್ಷಿಣ ಭಾರತ ಹಿಂದಿ ಪ್ರಚಾರಸಭಾದ ಅಧ್ಯಕ್ಷರು ಹಾಗೂ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಬಿಜೆಪಿ ಮುಖಂಡರಾದ, ಸಂಜಯ ಕಪಟಕರ, ಸುನೀಲ ಮೋರೆ, ಶ್ರೀನಿವಾಸ ಕೊಟ್ಯಾನ್‌, ಶಕ್ತಿ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next