Advertisement

ವಿಮೆ ಕ್ಲೇಮು ಅರ್ಜಿ ವಿಳಂಬ ಆಯಿತೆಂದು ತಿರಸ್ಕಾರ ಸರಿಯಲ್ಲ

07:05 AM Oct 09, 2017 | |

ಹೊಸದಿಲ್ಲಿ:  ಪರಿಹಾರ ಕೋರಿ ಅರ್ಜಿ ಸಲ್ಲಿಸುವುದಕ್ಕೆ ವಿಳಂಬವಾಗಿದೆ ಎಂಬ ಕಾರಣಕ್ಕೆ ವಿಮೆ ಕ್ಲೇಮು ತಿರಸ್ಕಾರ ಸರಿಯಲ್ಲ ಎಂದಿದೆ ಸುಪ್ರೀಂ ಕೋರ್ಟ್‌. 

Advertisement

ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಅರ್ಜಿಯನ್ನು ತಿರಸ್ಕರಿಸುವುದರಿಂದ ಪಾಲಿಸಿದಾರರು ವಿಮಾ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾದೀತು ಎಂದಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ವ್ಯಕ್ತಿಯೊಬ್ಬರು ವಿಳಂಬವಾಗಿ ಕ್ಲೇಮು ಅರ್ಜಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕಾಗಿ ಅದನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅದರ ವಿಚಾರಣೆ ನಡೆಸಿದ ವೇಳೆ ಖಾಸಗಿ ವಿಮಾ ಕಂಪೆನಿಯೊಂದು ಹಿಸ್ಸಾರ್‌ನ ವ್ಯಕ್ತಿಗೆ 8.35 ಲಕ್ಷ ರೂ.ಪರಿಹಾರ ನೀಡುವಂತೆ ಆದೇಶಿಸಿತು.
 

Advertisement

Udayavani is now on Telegram. Click here to join our channel and stay updated with the latest news.

Next